ಮುಖ್ಯಮಂತ್ರಿಯಿಂದ ಬಹುಮಾನ ಪಡೆದಿದ್ದಕ್ಕೆ ದಂಡ ಕಟ್ಟುವ ಸ್ಥಿತಿ

Published : Jun 10, 2018, 02:35 PM IST
ಮುಖ್ಯಮಂತ್ರಿಯಿಂದ ಬಹುಮಾನ ಪಡೆದಿದ್ದಕ್ಕೆ ದಂಡ ಕಟ್ಟುವ ಸ್ಥಿತಿ

ಸಾರಾಂಶ

ಸಾಮಾನ್ಯ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗುವುದೇ ಒಂದು ಖುಷಿ. ಅಂತಾದ್ದರಲ್ಲಿ ರಾಜ್ಯಕ್ಕೇ ಟಾಪರ್‌ ಆಗಿ, ಮುಖ್ಯಮಂತ್ರಿಯಿಂದಲೇ ಬಹುಮಾನ ಪಡೆದರೆ ಇನ್ನೆಷ್ಟುಖುಷಿಯಾಗಬೇಡ? ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟಾಪರ್‌ ಎನಿಸಿ, ಮುಖ್ಯಮಂತ್ರಿಯಿಂದ ಬಹುಮಾನ ಪಡೆದ ತಪ್ಪಿಗೆ ಈಗ ದಂಡ ಕಟ್ಟಬೇಕಾಗಿ ಬಂದಿದೆ.

ಲಖನೌ: ಸಾಮಾನ್ಯ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗುವುದೇ ಒಂದು ಖುಷಿ. ಅಂತಾದ್ದರಲ್ಲಿ ರಾಜ್ಯಕ್ಕೇ ಟಾಪರ್‌ ಆಗಿ, ಮುಖ್ಯಮಂತ್ರಿಯಿಂದಲೇ ಬಹುಮಾನ ಪಡೆದರೆ ಇನ್ನೆಷ್ಟುಖುಷಿಯಾಗಬೇಡ? ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟಾಪರ್‌ ಎನಿಸಿ, ಮುಖ್ಯಮಂತ್ರಿಯಿಂದ ಬಹುಮಾನ ಪಡೆದ ತಪ್ಪಿಗೆ ಈಗ ದಂಡ ಕಟ್ಟಬೇಕಾಗಿ ಬಂದಿದೆ.

ಹೌದು, ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ ಬಾರಾಬಂಕಿ ಜಿಲ್ಲೆಯ ಅಲೋಕ್‌ ಮಿಶ್ರಾ ರಾಜ್ಯಕ್ಕೇ ಏಳನೇ ರಾರ‍ಯಂಕ್‌ ಪಡೆದಿದ್ದ. ಅದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ ಅವರಿಗೆ 1 ಲಕ್ಷ ರು. ಬಹುಮಾನದ ಚೆಕ್‌ ನೀಡಿದ್ದರು.

ಆದರೆ, ಈ ಚೆಕ್‌ ಬ್ಯಾಂಕ್‌ನಲ್ಲಿ ನಗದೀಕರಣವಾಗದೆ, ಚೆಕ್‌ ಬೌನ್ಸ್‌ ಆಗಿದೆ. ಈ ರೀತಿ ಚೆಕ್‌ ಬೌನ್ಸ್‌ ಆಗಿರುವುದರಿಂದ, ವಿದ್ಯಾರ್ಥಿಯೂ ದಂಡ ಕಟ್ಟಿದ್ದಾನೆ. ಸಹಿ ಹೊಂದಾಣಿಕೆಯಾಗದ ಕಾರಣ ಚೆಕ್‌ ಬೌನ್ಸ್‌ ಆಗಿದೆ. ವಿಷಯ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿಗೆ ಹೊಸ ಚೆಕ್‌ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!