
ಚೆನ್ನೈ[ಜು.24]: ಪಕ್ಕದಲ್ಲೇ ಸಮುದ್ರವಿದ್ದರೂ ನೀರಿನ ಬರ ನೀಗಿಸಿಕೊಳ್ಳಲಾಗದ ಚೆನ್ನೈ ಮಹಾನಗರ ಜಲಮಂಡಳಿ ಇದೀಗ, ಭೂಮಿ ಆಚೆಯ ಪರಿಹಾರ ಕಂಡುಕೊಳ್ಳುವತ್ತ ದೃಷ್ಟಿಹರಿಸಿದೆ! ನಿಜ. ನಗರಕ್ಕೆ ನೀರು ಪೂರೈಸುವ ಮೂಲಗಳೆಲ್ಲವೂ ಬತ್ತಿ ಹೋಗಿ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜಲಮಂಡಳಿ ಇದೀಗ ನೀರಿಗಾಗಿ ಇಸ್ರೋದ ಮೊರೆ ಹೋಗಿದೆ.
ಸೋಮವಾರವಷ್ಟೇ ಚಂದ್ರಯಾನ 2 ನೌಕೆಯ ಯಶಸ್ವಿ ಉಡ್ಡಯನದ ಬಗ್ಗೆ ಇಸ್ರೋಗೆ ಅಭಿನಂದನೆ ಸಲ್ಲಿಸಿರುವ ಜಲಮಂಡಳಿ, ‘ನಾವು ನಗರಕ್ಕೆ ನೀರಿನ ಮೂಲವನ್ನು ವೃದ್ಧಿಸುವ ಯತ್ನದಲ್ಲಿದ್ದೇವೆ. ಒಂದು ವೇಳೆ ಚಂದ್ರನ ಮೇಲೆ ನೀರು ಕಂಡುಬಂದರೆ, ನೀವು ಮೊದಲು ಯಾರನ್ನು ಸಂಪರ್ಕಿಸಬೇಕು ಗೊತ್ತಲ್ಲವೇ? ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ ಭಾರೀ ಸುದ್ದಿ ಮಾಡುತ್ತಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಜಲಮಂಡಳಿ ಟ್ವೀಟರ್ ನಿರ್ವಾಹಕರು, ನಾವು ಜನರೊಂದಿಗೆ ವಿನೂತನ ರೀತಿಯಲ್ಲಿ ಸಂಪರ್ಕ ಹೊಂದಲು ಬಯಸಿದ್ದೇವೆ. ಸಾಂಪ್ರದಾಯಿಕ ಉತ್ತರಗಳು ಮತ್ತು ಪ್ರತ್ರಿಕ್ರಿಯೆಗಳ ಹೊರತಾದ ಯಾವುದೇ ಸಂವಾದ ಹೆಚ್ಚು ಫಲಪ್ರದವಾಗುವ ಕಾರಣ ಇಂಥ ಟ್ವೀಟ್ ಮಾಡಲಾಗಿದೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.