ಹೀಗಿದೆ ರಾಹುಲ್-ಸಿದ್ದರಾಮಯ್ಯ ನಡುವಿನ ಕೆಮಿಸ್ಟ್ರಿ!

Published : Dec 05, 2017, 05:33 PM ISTUpdated : Apr 11, 2018, 01:11 PM IST
ಹೀಗಿದೆ ರಾಹುಲ್-ಸಿದ್ದರಾಮಯ್ಯ ನಡುವಿನ ಕೆಮಿಸ್ಟ್ರಿ!

ಸಾರಾಂಶ

ಗಾಂಧಿ ಕುಟುಂಬದ ನಾಯಕರು ಯಾವುದೇ ರಾಜ್ಯ ನಾಯಕನನ್ನು ಬರಸೆಳೆದು ಅಪ್ಪಿಕೊಳ್ಳುವ ಪರಂಪರೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇಲ್ಲ. ಪಂಡಿತ್ ಜವಾಹರ್ ಲಾಲ್ ನೆಹರು ಬಿಡಿ ಪರಮೋಚ್ಚ ನಾಯಕರಾಗಿದ್ದರು. ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಮಿತ್ರರನ್ನು ಬಿಟ್ಟು ರಾಜ್ಯ ನಾಯಕರನ್ನು ಅಪ್ಪಿಕೊಂಡಿದ್ದು ಕಡಿಮೆ.

ರಾಹುಲ್ ಸಿದ್ದರಾಮಯ್ಯ ಆಲಿಂಗನ

ಗಾಂಧಿ ಕುಟುಂಬದ ನಾಯಕರು ಯಾವುದೇ ರಾಜ್ಯ ನಾಯಕನನ್ನು ಬರಸೆಳೆದು ಅಪ್ಪಿಕೊಳ್ಳುವ ಪರಂಪರೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇಲ್ಲ. ಪಂಡಿತ್ ಜವಾಹರ್ ಲಾಲ್ ನೆಹರು ಬಿಡಿ ಪರಮೋಚ್ಚ ನಾಯಕರಾಗಿದ್ದರು. ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಮಿತ್ರರನ್ನು ಬಿಟ್ಟು ರಾಜ್ಯ ನಾಯಕರನ್ನು ಅಪ್ಪಿಕೊಂಡಿದ್ದು ಕಡಿಮೆ. ಇಂದಿರಾ ಮತ್ತು ಸೋನಿಯಾ ಮಹಿಳೆಯರು ಆದ್ದರಿಂದ ಅಂತಹ ಪ್ರಮೇಯವೇ ಉದ್ಭವವಾಗಿಲ್ಲ. ಯಾವುದೇ ನಾಯಕನಿಗೆ ಬಹಿರಂಗವಾಗಿ ಆಲಿಂಗಿಸಿಕೊಂಡರೆ ಉಳಿದವರಿಗೆ ಏನು ಸಂದೇಶ ಹೋಗುತ್ತದೆ ಎಂಬ ಕಾರಣವೂ ಇತ್ತು ಅನ್ನಿ. ಆದರೆ ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್, ಸಿದ್ಧರಾಮಯ್ಯ ಅವರನ್ನು ಬರಸೆಳೆದು ಅಪ್ಪಿಕೊಂಡಿದ್ದು ನೋಡಿದರೆ, ಇಬ್ಬರ ನಡುವೆ ಕೆಮಿಸ್ಟ್ರಿ ಹೇಗಿದೆ ಎಂದು ಗೊತ್ತಾಗುತ್ತಿತ್ತು. ಕೆಲ ದಿನಗಳ ಹಿಂದೆ ಯುವ ಕಾಂಗ್ರೆಸ್ ನಾಯಕರ ಎದುರು ರಾಹುಲ್ ನಮಗೆ ಎಲ್ಲ ರಾಜ್ಯಗಳಲ್ಲಿ ಸಿದ್ಧರಾಮಯ್ಯ ತರಹದ ನಾಯಕರು ಬೇಕು ಎಂದು ಹೇಳಿದ್ದರಂತೆ. ಈ ಸಮೀಕರಣ ಇರುವುದರಿಂದಲೇ ಇರಬೇಕು ಸೋನಿಯಾರಿಂದ ನಿರ್ಣಯ ಅಧಿಕಾರ ರಾಹುಲ್ ಬಳಿ ಬಂದ ಮೇಲೆ ಸಿದ್ಧರಾಮಯ್ಯ ಕೇಳಿದ್ದಕ್ಕೆಲ್ಲ ಎಸ್‌ಎಸ್ ಎಂದು ಉತ್ತರ ಬರುತ್ತಿದೆ.

 

ಪ್ರಶಾಂತ್ ನಾತು

(ಇಂಡಿಯಾ ಗೇಟ್ ಆಯ್ದ ಭಾಗ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

4 ಸಾವಿರಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ಅಷ್ಟಾಂಗ ಹೃದಯ ಸಂಹಿತೆ ಪಠಣ: ಆಯುರ್ವೇದದಲ್ಲಿ ಐತಿಹಾಸಿಕ ದಾಖಲೆ
ಟೀಕಾಕಾರರನ್ನು ಬಂಧಿಸಲು ದ್ವೇಷದ ಬಿಲ್‌ ತಂದಿದ್ದೇವೆ ಎಂಬುದು ಸುಳ್ಳು: ಡಿ.ಕೆ.ಶಿವಕುಮಾರ್ ಲೇಖನ