ಭಾರತದ ಮೇಲೆ ಕೆಮಿಕಲ್ ದಾಳಿ ಮಾಡಲು ಪ್ಲಾನ್: ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿಯುಳ್ಳ ಆಡಿಯೋ ಟೇಪ್ ಬಹಿರಂಗ

Published : Jul 13, 2017, 08:31 AM ISTUpdated : Apr 11, 2018, 12:43 PM IST
ಭಾರತದ ಮೇಲೆ ಕೆಮಿಕಲ್ ದಾಳಿ ಮಾಡಲು ಪ್ಲಾನ್: ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿಯುಳ್ಳ ಆಡಿಯೋ ಟೇಪ್ ಬಹಿರಂಗ

ಸಾರಾಂಶ

ಪಾಕಿಸ್ತಾನ ಮಾತ್ರ ಬದಲಾದ ಹಾಗೇ ಕಾಣಿಸುತ್ತಿಲ್ಲ. ದೇಶದ ತುಂಬ ಉಗ್ರ ಸಂಘಟನೆಗಳನ್ನ ಸಾಕಿರುವ ನರಿ ಬುದ್ಧಿಯ ಪಾಕ್ ಭಾರತ ಮೇಲೆ ದಾಳಿಗೆ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೆ ಇದೆ. ಆದರೆ, ಈ ಬಾರಿ ಪಾಕ್ ಉಗ್ರ ಸಂಘಟನೆ ಮಾಡಿರುವ ಕುತಂತ್ರ ಭಾರತವನ್ನೇ ಬೆಚ್ಚಿ ಬೀಳಿಸುವಂತಹದ್ದು , ಏನದು ಯಾವ ಪ್ಲಾನ್? ಇಲ್ಲಿದೆ ವರದಿ

ನವದೆಹಲಿ(ಜು.13): ಪಾಕಿಸ್ತಾನ ಮಾತ್ರ ಬದಲಾದ ಹಾಗೇ ಕಾಣಿಸುತ್ತಿಲ್ಲ. ದೇಶದ ತುಂಬ ಉಗ್ರ ಸಂಘಟನೆಗಳನ್ನ ಸಾಕಿರುವ ನರಿ ಬುದ್ಧಿಯ ಪಾಕ್ ಭಾರತ ಮೇಲೆ ದಾಳಿಗೆ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೆ ಇದೆ. ಆದರೆ, ಈ ಬಾರಿ ಪಾಕ್ ಉಗ್ರ ಸಂಘಟನೆ ಮಾಡಿರುವ ಕುತಂತ್ರ ಭಾರತವನ್ನೇ ಬೆಚ್ಚಿ ಬೀಳಿಸುವಂತಹದ್ದು , ಏನದು ಯಾವ ಪ್ಲಾನ್? ಇಲ್ಲಿದೆ ವರದಿ

ಕಳೆದ ಮೂರು ದಿನಗಳ ಹಿಂದೆಯಷ್ಟೇ ಪಾಕ್ ನ ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ಅಮರನಾಥ ಯಾತ್ರಿಗಳ ಮೇಲೆ ಅಟ್ಟಹಾಸ ಮೆರೆದು 7 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು, ಈಗ ಮತ್ತೆ ಪಾಕ್'ನ ಹಿಜ್ಬುಲ್ ಉಗ್ರ ಸಂಘಟನೆ ಭಾರತದ ಮೇಲೆ ಕೆಮಿಕಲ್ ದಾಳಿ ಮಾಡಲು ಪ್ಲಾನ್ ಮಾಡಿದೆ..

ಪಾಕ್ ನ ಉಗ್ರ ಸಂಘಟೆನಗಳು ಕಾಲು ಕೆರೆದು ಭಾರತದ ಮೇಲೆ ದಾಳಿ ಮಾಡುತ್ತಲೇ ಇದೆ. ಈಗ ಮತ್ತೆ ಭಾರತದ ಮೇಲೆ ಕೆಮಿಕಲ್ ವಾರ್ ಗೆ ಹಿಜ್ಬುಲ್ ಉಗ್ರ ಸಂಘಟನೆ ಸಿದ್ಧಗೊಂಡಿರುವ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ಆಡಿಯೋ ಟೇಪ್'ನಲ್ಲಿ ಬಹಿರಂಗಗೊಂಡಿದೆ. ಕಾಶ್ಮೀರದಲ್ಲಿ ಕೆಮಿಕಲ್ ಬಾಂಬ್ ಪ್ರಯೋಗಿಸಲು ಈ ಉಗ್ರ ಸಂಫಟನೆ ಹೊಂಚು ಹಾಕುತ್ತಿದೆ. ಈಗಾಗಲೇ ಕೆಮಿಕಲ್ ವೆಪನ್ಸ್ ಗಳು ಹಿಜ್ಬುಲ್ ಉಗ್ರ ಸಂಘಟನೆಯ ಉಗ್ರರ ಕೈ ಸೇರಿರುವ ಮಾಹಿತಿ ಸಿಕ್ಕಿದ್ದು. ಪಾಕಿಸ್ತಾನದ ನರಿ ಬುದ್ಧಿ ಈ ಆಡಿಯೋ ಟೇಪ್ ಮೂಲಕ ಮತ್ತೆ ಬಯಲಾಗಿದೆ. ಕೆಮಿಕಲ್ ಬಾಂಬ್ ಪ್ರಯೋಗದ ಪ್ಲಾನ್ ರೂಪಿಸಲು ಉಗ್ರರು, ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಹಿದ್ ಜೊತೆ ಮಾತನಾಡಿರುವ ಆಡಿಯೋ ಬಹಿರಂಗಗೊಂಡಿದೆ.

‘ಪೀರ್ ಸಾಹಿಬ್ (LET ಮುಖ್ಯಸ್ಥ ಹಫೀಜ್ ಸೈಯದ್) ನಮ್ಮ ಮುಂದಿನ ಕಾರ್ಯಕ್ರಮ ಈದ್ ಬಳಿಕ. ನಾವು ಈದ್ ಮುಗಿದ ಬಳಿಕ ನಮ್ಮ ಮುಂದಿನ ಕಾರ್ಯಕ್ರಮದ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಇನ್‌ಶಾಲ್ಲಾ, ನಾವು ಪಾಕಿಸ್ತಾನದಿಂದ ಸಾಕಷ್ಟು ಬೆಂಬಲ ಪಡೆದಿದ್ದೇವೆ. ಕೆಲವೇ ದಿನಗಳಲ್ಲಿ ಪಾಕಿಸ್ತಾನ,  ಭಾರತ ವಿರೋಧಿ ನಿಲುವು ತಾಳುತ್ತಿದೆ. ಸದ್ಯಕ್ಕೆ ನಾವು ಭಾರತೀಯ ಸೇನೆ ಮೇಲೆ ಗ್ರೆನೇಡ್ ಬಳಸುತ್ತಿದ್ದೇವೆ. ಅದರಿಂದ ನಾವು 3ರಿಂದ 4 ಉಗ್ರರನ್ನು ಮಾತ್ರ ಸಾಯಿಸಬಹುದು. ಗಾಯಗೊಳಿಸಬಹುದು. ಆದರೆ ಈಗ ನಮ್ಮ ತಂತ್ರ ಬದಲಾಗಿದೆ. ನಾವು ನೇರವಾಗಿ ಕೆಮಿಕಲ್ ಶಸ್ತ್ರಾಸ್ತ್ರ ಬಳಸಲು ಸಿದ್ದಗೊಂಡಿದ್ದೇವೆ. ಒಂದೇ ಸಮಯದಲ್ಲಿ ಹಲವು ಸೈನಿಕರನ್ನು ಹೊಡೆದುರುಳಿಸಬಹುದು.

ಭಾರತ ಮೇಲೆ ನೇರವಾಗಿ ಯುದ್ಧಮಾಡಿ ಗೆಲ್ಲುವ ತಾಕತ್ತು ಇಲ್ಲದ ನರಿ ಬುದ್ಧಿಯ ಪಾಕ್, ಉಗ್ರ ಸಂಘಟನೆಗಳನ್ನು ಭಾರತ ಮೇಲೆ ದಾಳಿಗೆ ಛೂ ಬೀಡುತ್ತಲೇ ಇದೆ. ಭಾರತದ ಮೇಲೆ ಕೆಮಿಕಲ್ ವಾರ್ ಮಾಡುವ ಸುದ್ದಿ ಹರಿದಾಡುತ್ತಿದ್ದು, ಪಾಕ್'ನ ಈ ಆಗುಂತಕ ಪ್ಲಾನ್'ಗೆ ಭಾರತ ಸನ್ನದ್ದವಾಗಬೇಕಿದೆ. ಪಾಕ್'ನ ಈ ತಂತ್ರಕ್ಕೆ ತಿರುಗುಬಾಣ ನೀಡಲು ಸಿದ್ಧವಾಗಬೇಕಿದೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌