ದಾರಿ ತಪ್ಪಿದ ಗಂಡ..ಕ್ಯಾಮೆರಾ ಕಣ್ಣಿಟ್ಟ ಹೆಂಡತಿ: ಹಾಲ್'ನಲ್ಲೇ ನಡೆಯುತ್ತಿತ್ತು ಹಾಲೇಶನ ಆಟ

Published : Jan 03, 2017, 02:28 AM ISTUpdated : Apr 11, 2018, 12:46 PM IST
ದಾರಿ ತಪ್ಪಿದ ಗಂಡ..ಕ್ಯಾಮೆರಾ ಕಣ್ಣಿಟ್ಟ ಹೆಂಡತಿ: ಹಾಲ್'ನಲ್ಲೇ ನಡೆಯುತ್ತಿತ್ತು ಹಾಲೇಶನ ಆಟ

ಸಾರಾಂಶ

ಪತಿಯ ಪಲ್ಲಂಗ ಪುರಾಣ ಕಂಡು ಹಿಡಿಯಲು ಹೆಂಡತಿ ಯಾವೆಲ್ಲ ಮಾರ್ಗಗಳನ್ನು ಹುಡುಕಬಹುದು..? ಕಟ್ಟಿಕೊಂಡ ಪತ್ನಿಯಿದ್ದೂ, ಬೇರೊಬ್ಬಳ ಸಂಗ ಮಾಡುತ್ತಿದ್ದ ಗಂಡನ ಚೆಲ್ಲಾಟವನ್ನು ಪತ್ನಿಯೊಬ್ಬಳು ಬಯಲು ಮಾಡಿ, ಆತನನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಂದಹಾಗೆ ಗಂಡನ ಹಗ್ಗ ಕಡಿಯುವ ಚಾಳಿಯನ್ನು, ಈಕೆ ರಹಸ್ಯ ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ಬಯಲು ಮಾಡಿದ್ದು ಹೇಗೆ? ಇಲ್ಲಿದೆ ವಿವರ

ಶಿವಮೊಗ್ಗ(ಜ.03): ಪತಿಯ ಪಲ್ಲಂಗ ಪುರಾಣ ಕಂಡು ಹಿಡಿಯಲು ಹೆಂಡತಿ ಯಾವೆಲ್ಲ ಮಾರ್ಗಗಳನ್ನು ಹುಡುಕಬಹುದು..? ಕಟ್ಟಿಕೊಂಡ ಪತ್ನಿಯಿದ್ದೂ, ಬೇರೊಬ್ಬಳ ಸಂಗ ಮಾಡುತ್ತಿದ್ದ ಗಂಡನ ಚೆಲ್ಲಾಟವನ್ನು ಪತ್ನಿಯೊಬ್ಬಳು ಬಯಲು ಮಾಡಿ, ಆತನನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಂದಹಾಗೆ ಗಂಡನ ಹಗ್ಗ ಕಡಿಯುವ ಚಾಳಿಯನ್ನು, ಈಕೆ ರಹಸ್ಯ ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ಬಯಲು ಮಾಡಿದ್ದು ಹೇಗೆ? ಇಲ್ಲಿದೆ ವಿವರ

ಹೆಂಡತಿಯಿದ್ದರೂ..ದಾರಿ ತಪ್ಪಿದ ಗಂಡ

ಈಕೆಯ ಹೆಸರು ಶೋಭಾ. ವಯಸ್ಸು 24 ವರ್ಷ. ಮದುವೆಯಾಗಿ 4 ವರ್ಷಗಳಾಗಿತ್ತಷ್ಟೇ. ಆದರೆ, ತಾಳಿ ಕಟ್ಟಿದ್ದ ಗಂಡ ಹಾಲೇಶ ನಾಯ್ಕ, ಮದುವೆಯಾಗಿ 6 ತಿಂಗಳಿಗೇ ದಾರಿ ತಪ್ಪಿದ್ದ. ಹೆಂಡತಿ ಹೊರಗೆ ಹೋದ ತಕ್ಷಣ, ಮನೆಯಲ್ಲಿ ಈತನ ಇನ್ನೊಂದು ಆಟ ಶುರುವಾಗುತ್ತಿತ್ತು.

ಪರಸ್ತ್ರೀ ಜೊತೆ ಪಲ್ಲಂಗ ಏರಿದ ಹಾಲೇಶ

ಪತ್ನಿ ಶೋಭಾಗೆ ತನ್ನ ಗಂಡನ ಮೇಲೆ ಅನುಮಾನ ಬಂದಿತ್ತು. ಮನೆಯವರಿಗೆ ಹೇಳಿದರೆ ಯಾರೂ ಆಕೆಯ ಮಾತನ್ನು ನಂಬಿರಲಿಲ್ಲ. ಹೀಗಾಗಿ ಶೋಭಾ ತಾನೇ ಪತ್ತೇದಾರಿಕೆಗಿಳಿದರು. ಆಗ ಬಯಲಿಗೆ ಬಿದ್ದಿದ್ದು  ಹಾಲೇಶ ನಾಯ್ಕನ ಅಸಲಿ ಬಂಡವಾಳ.

ಗಂಡನ ಚೆಲ್ಲಾಟಕ್ಕೆ ‘ರಹಸ್ಯ ಕ್ಯಾಮೆರಾ’ ಇಟ್ಟ ಪತ್ನಿ

ಅವರ ಮನೆಯ ಹಾಲ್​ನಲ್ಲಿ ಟಿವಿಯ ಎದುರಿಗೇ ದಿವಾನ್ ಕಾಟ್ ಇದೆ. ಆ ದಿವಾನ್ ಕಾಟ್​'ನ ಹಿಂದೆ ರಹಸ್ಯ ಕ್ಯಾಮೆರಾ ಇಟ್ಟರು ಶೋಭಾ. ಇದರಿಂದ ಹಾಲೇಶ ನಾಯ್ಕನ ಕೃಷ್ಣಲೀಲೆ ಬಯಲಿಗೆ ಬಿತ್ತು. ಪ್ರೇಯಸಿಯ ಜೊತೆ ಗಂಡನ ಬೆತ್ತಲೆ ಜಗತ್ತು ಬಯಲಾಗಿತ್ತು.

ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದ ‘ಕಳ್ಳ’ ಪತಿರಾಯ

ಅಂದಹಾಗೆ ಈ ವಿಡಿಯೋ ಮಾಡಿದ ಶೋಭಾ, ಅಷ್ಟಕ್ಕೇ ಸುಮ್ಮನಾಗಲಿಲ್ಲ. ಗಂಡನನ್ನು ಪ್ರಶ್ನಿಸಿದಳು. ಅಷ್ಟಕ್ಕೇ ಸಿಟ್ಟಿಗೆದ್ದ ಹಾಲೇಶ ನಾಯ್ಕ ಮಚ್ಚಿನಿಂದ ಹೆಂಡತಿಗೇ ಹೊಡೆದಿದ್ದ. ಅಂದು ತಲೆ, ಕೈಗೆ ಏಟು ತಿಂದಿದ್ದ ಶೋಭಾ, ಪ್ರಾಣಾಪಾಯದಿಂದ ಬಚಾವ್ ಆದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯ ತಾಯಿಗೆ ಮಗಳ ಬದುಕು ಹೀಗಾಯಿತಲ್ಲ ಎಂಬ ಆಘಾತವನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಗಂಡ ಹೆಂಡತಿ ಮಧ್ಯೆ ಅವಳು

ಅತ್ತ ಗಂಡ ಹಾಲೇಶ ನಾಯ್ಕ, ಅಂದಿನಿಂದ ತಲೆ ಮರೆಸಿಕೊಂಡಿದ್ದಾನೆ. ಇತ್ತ ಆತನ ಪ್ರೇಯಸಿಯೂ ನಾಪತ್ತೆಯಾಗಿದ್ದಾಳೆ. ಶೋಭಾ ಮನೆಯವರು ಈಗ ಹಾಲೇಶ ನಾಯ್ಕನನ್ನ ಹುಡುಕ್ತಾ ಇದಾರೆ.

ಕಳ್ಳಾಟ ಬಯಲಾದಾಗ ರೌಡಿಯಾದ ಗಂಡ

ಗಂಡನ ಚೆಲ್ಲಾಟವನ್ನೇನೋ ಪತ್ತೇದಾರಿಕೆ ಮಾಡಿ ಹಿಡಿದದ್ದಾಯ್ತು. ಆದರೆ, ರೌಡಿಯಾದ ಗಂಡನಿಗೆ ಶಿಕ್ಷೆ ಬೇಡವೇ..? ಆದರೆ ಇದೀಗ ನಾಪತ್ತೆಯಾದ ಹಾಲೇಶ ನಾಯ್ಕ ಎಲ್ಲಿದ್ದಾನೆ ೆಂಬುವುದು ಯಾರಿಗೂ ತಿಳಿದಿಲ್ಲ ಪೊಲೀಸರಿನ್ನೂ ಆತನನ್ನು ಹುಡುಕುತ್ತಲೇ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶತ್ರುಗಳನ್ನು ಕ್ಷಮಿಸುವುದಕ್ಕೇ ಹುಟ್ಟಿದ ಯೇಸು.. ಒಳ್ಳೆಯದಕ್ಕೆ ಸಿಕ್ಕಿದ್ದು ಶಿಕ್ಷೆ ಮಾತ್ರ!
ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!