
ಪಣಜಿ: ತಮ್ಮ ಹೊಲದಲ್ಲಿ ಉತ್ತಮ ಬೆಳೆ ಪಡೆಯಬೇಕಾದರೆ ಇನ್ಮುಂದೆ ರೈತರು ಪ್ರತಿದಿನ ಒಂದೆಡೆ ಕೂತು 20 ನಿಮಿಷಗಳ ಕಾಲ ‘ಓಂ ರೂಂ ಜುಂ ಸಾಹ್’ ಪಠಿಸಬೇಕು! ರೈತರ ಬೆಳೆ ವೈಫಲ್ಯ ಸಮಸ್ಯೆಗೆ ಇಂತಹ ಒಂದು ಪರಿಹಾರ ಹುಡುಕುವ ಪ್ರಯತ್ನಕ್ಕೆ ಗೋವಾ ಸರ್ಕಾರ ಕೈಹಾಕಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ಸ್ ವರದಿ ಮಾಡಿದೆ.
ಶಿವಯೋಗ ಕಾಸ್ಮಿಕ್ ಫಾರ್ಮಿಂಗ್ [ಶಿವಯೋಗ ಬ್ರಹ್ಮಾಂಡೀಯ ಕೃಷಿ] ಎಂಬ ಯೋಜನೆಗೆ ಚಾಲನೆ ನೀಡಿದ ಕೃಷಿ ಸಚಿವ ವಿಜಯ್ ಸರ್ದೇಸಾಯಿ, ಈ ಕೃಷಿಕ್ರಮವನ್ನು ಅನುಸರಿಸಲು ಹಣದ ಅಗತ್ಯವಿಲ್ಲ. ಉತ್ತಮ ಕೃಷಿಗಾಗಿ ಯಾವುದೇ ಹೊಸ ವಿಧಾನವನ್ನು ಅಳವಡಿಸಲು ತಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಈ ‘ನೂತನ’ ಕೃಷಿ ಕ್ರಮವನ್ನು ಪರಿಚಯಿಸಿದವರು ಗುರ್ಗಾಂವ್ ನ ಸ್ವಾಮಿಜಿ ಡಾ. ಶಿವಾನಂದ ಅವಧೂತ ಎಂಬವರು. ಕೆಮಿಕಲ್ ಇಂಜಿನಿಯರ್ ಆಗಿದ್ದ ಡಾ. ಶಿವಾನಂದ ಈಗ ಶಿವಯೋಗ ಫೌಂಡೇಶನ್ ನಡೆಸುತ್ತಿದ್ದಾರೆ. ಸಚಿವ ವಿಜಯ್ ಸರ್ದೇಶಾಯಿ ಪತ್ನಿ ಉಷಾ ಸ್ವಾಮೀಜಿಯ ಭಕ್ತೆಯಾಗಿದ್ದು, ಅವರ ವಿಚಾರಗಳನ್ನು ಅನುಸರಿಸುತ್ತಾರೆ.
ನನಗೂ ಮೊದಮೊದಲು ಇದರ ಬಗ್ಗೆ ಅನುಮಾನಗಳಿತ್ತು. ಆದರೆ ಇದು ಯಾವುದೇ ಪವಾಡವಲ್ಲ, ಬದಲಾಗಿ ಇದರ ಬಗ್ಗೆ ಸಾಕಷ್ಟು ಅಧ್ಯಯನವಿದೆ, ಎಂದು ಸಚಿವರು ಹೇಳಿದ್ದಾರೆ.
ಸ್ವಾಮೀಜಿ ಹೇಳುವ ಕ್ರಮದಲ್ಲಿ ರೈತರು ಬೇಸಾಯ ಮಾಡುವ ವಿಡಿಯೋ ಕಳೆದ ಒಂದು ವಾರದಿಂದ ಗೋವಾದಲ್ಲಿ ವೈರಲ್ ಆಗಿದೆಯೆನ್ನಲಾಗಿದೆ. ಈ ಕ್ರಮವನ್ನು ಅನುಸರಿಸುವ ಮೂಲಕ ಬ್ರಹ್ಮಾಂಡೀಯ ಶಕ್ತಿಗಳನ್ನು ಆಧ್ಯಾತ್ಮದ ಮೂಲಕ ಮಣ್ಣಿಗೆ ವರ್ಗಾಯಿಸುಬಹುದು ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.