ಆಂಧ್ರದವರು ನೊಬೆಲ್ ಗೆದ್ದರೆ 100 ಕೋಟಿ ಬಹುಮಾನ

Published : Jan 05, 2017, 12:48 PM ISTUpdated : Apr 11, 2018, 12:49 PM IST
ಆಂಧ್ರದವರು ನೊಬೆಲ್ ಗೆದ್ದರೆ 100 ಕೋಟಿ ಬಹುಮಾನ

ಸಾರಾಂಶ

‘‘ಮಕ್ಕಳು ಕೆಲಸವನ್ನು ಇಷ್ಟಪಟ್ಟು ಮಾಡಬೇಕು ಮತ್ತು ಸಾಧನೆ ಪೂರ್ಣಗೊಳಿಸಲು ಕಷ್ಟಪಡಬೇಕು. ನಿಮ್ಮ ಸಣ್ಣ ಆವಿಷ್ಕಾರಗಳು ದೊಡ್ಡ ಮಟ್ಟದ ಸಂಶೋಧನೆಗೆ ಹಾದಿಮಾಡಿಕೊಡುತ್ತದೆ’’ - ಚಂದ್ರಬಾಬು ನಾಯ್ಡು

ತಿರುಪತಿ(ಜ.05): ಆಂಧ್ರಪ್ರದೇಶ ರಾಜ್ಯದ ಯಾವುದೇ ಕ್ಷೇತ್ರದ ಸಾಧಕರು ನೊಬೆಲ್ ಪ್ರಶಸ್ತಿ ಪಡೆದರೆ ಅವರಿಗೆ ರಾಜ್ಯ ಸರ್ಕಾರದಿಂದ ₹100 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘‘ಮಕ್ಕಳು ಕೆಲಸವನ್ನು ಇಷ್ಟಪಟ್ಟು ಮಾಡಬೇಕು ಮತ್ತು ಸಾಧನೆ ಪೂರ್ಣಗೊಳಿಸಲು ಕಷ್ಟಪಡಬೇಕು. ನಿಮ್ಮ ಸಣ್ಣ ಆವಿಷ್ಕಾರಗಳು ದೊಡ್ಡ ಮಟ್ಟದ ಸಂಶೋಧನೆಗೆ ಹಾದಿಮಾಡಿಕೊಡುತ್ತದೆ,’’ ಎಂದು ಬಾಬು ಸಲಹೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ 2015ರ ನೊಬೆಲ್ ಪುರಸ್ಕೃತ ಜಪಾನ್ ಭೌತಶಾಸ್ತ್ರ ಪ್ರೊ. ತಕಾಕಿ ಕಜಿತ ಅವರಿಗೆ ಸನ್ಮಾನ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ