
ಡೆಹ್ರಾಡೂನ್(ನ.2): ಉನ್ನತ ಹುದ್ದೆಯಲ್ಲಿರುವವರು ಯಾವತ್ತೂ ತಮ್ಮ ಮಕ್ಕಳನ್ನು ಹೈಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ. ಆದರೆ ಅದಕ್ಕೆ ಅಪವಾದವೆಂಬಂತೆ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದ್ದಾರೆ.
ಚಮೋಲಿ ಜಿಲ್ಲೆಯ ಜಿಲ್ಲಾ ಮೆಜಿಸ್ಟ್ರೇಟ್ ಸ್ವಾತಿ ಭಧೋರಿಯಾ ತಮ್ಮ ಎರಡೂವರೆ ವರ್ಷ ಪ್ರಾಯದ ಮಗ ಅಭ್ಯುದಯನನ್ನು, ದುಬಾರಿ ಶಾಲೆಯ ಬದಲು ಗೋಪೇಶ್ವರ ಎಂಬ ಗ್ರಾಮದ ಅಂಗನವಾಡಿಗೆ ಸೇರಿಸಿದ್ದಾರೆ.
ತನ್ನ ಮಗ ಇತರೊಂದಿಗೆ ಹಂಚುವ, ಸಹಕರಿಸುವ ಅಭ್ಯಾಸ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಆ ರೀತಿಯ ವಾತಾವರಣವಿರುವಲ್ಲಿ ಸೇರಿಸಿವುದಾಗಿ ಆಕೆ ಹೇಳಿದ್ದಾರೆ.
ಅಂಗನವಾಡಿಗಳಲ್ಲಿ ಶಿಕ್ಷಣ, ಆಟೋಟ ಹಾಗೂ ಊಟ-ತಿಂಡಿ ಎಲ್ಲವೂ ಒಟ್ಟೋಟ್ಟಾಗಿರುತ್ತದೆ. ಇತರ ಮಕ್ಕಳ ಜೊತೆ ಆತ ಅಂಗನವಾಡಿಯನ್ನು ಬಹಳವಾಗಿ ಆನಂದಿಸುತ್ತಾನೆ ಎಂದು ಸ್ವಾತಿ ಹೇಳಿದ್ದಾರೆ.
ಅಂಗನವಾಡಿಗಳ ಬಗ್ಗೆ ನಮಗಿರುವ ದೃಷ್ಟಿಕೋನ ಕೂಡಾ ಬದಲಾಗಬೇಕು ಎಂದು ಸ್ವಾತಿ ಹೇಳಿದ್ದಾರೆ. ಸ್ವಾತಿ ಪತಿ, ನಿತಿನ್ ಭಧೋರಿಯಾ ಕೂಡಾ ಐಎಎಸ್ ಅಧಿಕಾರಿಯಾಗಿದ್ದು, ಅಲ್ಮೋರಾ ಜಿಲ್ಲಾಧಿಕಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.