ಬಂಡಿ ಮಹಾಕಾಳಮ್ಮ ದೇವಾಲಯಕ್ಕೆ ನಾಯಿಮರಿ ಉಡುಗೊರೆ ಕೊಟ್ಟ ದರ್ಶನ್

First Published Jun 18, 2018, 6:15 PM IST
Highlights

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾಕಾಳಮ್ಮ ಟೆಂಪಲ್‌ಗೆ ನಾಯಿ ಮರಿಗಳನ್ನ ಉಡುಗೋರೆ ಆಗಿ ನೀಡಿದ್ದಾರೆ.  ಈ ಹಿಂದೆ ಶಿವರಾಜ್ ಕುಮಾರ್  ಬರ್ತ್ಡೇಗೆ ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನ ಇದೇ ದೇವಸ್ಥಾನಕ್ಕೆ ನೀಡಲಾಗಿತ್ತು. 

ಬೆಂಗಳೂರು (ಜೂ. 18): ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾಕಾಳಮ್ಮ ಟೆಂಪಲ್  ಗೆ ನಾಯಿ ಮರಿಗಳನ್ನ ಉಡುಗೋರೆ ಆಗಿ ನೀಡಿದ್ದಾರೆ.  

ಈ ಹಿಂದೆ ಶಿವರಾಜ್ ಕುಮಾರ್  ಬರ್ತ್ ಡೇಗೆ ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನ ಇದೇ ದೇವಸ್ಥಾನಕ್ಕೆ ನೀಡಲಾಗಿತ್ತು. 

ಪ್ರಾಣಿಪ್ರಿಯರಾಗಿರುವ ದರ್ಶನ ಆಗಾಗ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಿರುತ್ತಾರೆ. ಪ್ರಾಣಿಗಳ ಮೇಲೆ ವಿಶೇಷ ಒಲವು ಹೊಂದಿರುವ ದರ್ಶನ್ ಎರಡು ಮುದ್ದಾದ ನಾಯಿಮರಿಗಳನ್ನು ಉಡುಗೊರೆ ನೀಡಿದ್ದಾರೆ.  

ಅಮ್ಮನ ಸನ್ನಿಧಾನಕ್ಕೆ
ಈ ಯುಗದ ಬಂಗಾರದ ಮನುಷ್ಯ ಕರುನಾಡ ಕರ್ಣ ಚಾಲೆಂಜಿಂಗ್ ಸ್ಟಾರ್ ತೂಗುದೀಪ ಬಾಸ್ ಕೊಟ್ಟ ಉಡುಗೊರೆ 👌👌👌 pic.twitter.com/87RrQegzlQ

— CHALLENGING 'D' TEAM - R (@DTEAM7999)
click me!