ಸಮುದ್ರ ಕಾಪಾಡಲು ನೀರಿನೊಳಗೇ ಸಭೆ!

Published : Apr 12, 2017, 06:07 AM ISTUpdated : Apr 11, 2018, 12:44 PM IST
ಸಮುದ್ರ ಕಾಪಾಡಲು ನೀರಿನೊಳಗೇ ಸಭೆ!

ಸಾರಾಂಶ

ಕೇರಳದ ಕೋವಲಂ ಬೀಚ್‌ನಲ್ಲಿ 5 ಕಂಪನಿಗಳ ಸಿಇಒಗಳು 35 ನಿಮಿಷ ಕಾಲ ನೀರಿನೊಳಗೆ ಸಭೆ ನಡೆಸಿ, ಸಮುದ್ರ ಸಂಪತ್ತನ್ನು ಕಾಪಾಡುವ ಘೋಷಣೆ ಮಾಡಿದ್ದಾರೆ.

ತಿರುವನಂತಪುರ: ಕೇರಳದಲ್ಲಿ 5 ಕಂಪನಿಗಳ ಸಿಇಒಗಳು ಸಮುದ್ರದ ನೀರಿನೊಳಗೇ ಸಭೆ ನಡೆಸುವ ಮೂಲಕ ಜಗತ್ತಿನ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.

ನಿಜ. ಸೋಮವಾರ ಇಲ್ಲಿನ ಕೋವಲಂ ಬೀಚ್‌ನಲ್ಲಿ 5 ಕಂಪನಿಗಳ ಸಿಇಒಗಳು 35 ನಿಮಿಷ ಕಾಲ ನೀರಿನೊಳಗೆ ಸಭೆ ನಡೆಸಿ, ಸಮುದ್ರ ಸಂಪತ್ತನ್ನು ಕಾಪಾಡುವ ಘೋಷಣೆ ಮಾಡಿದ್ದಾರೆ.

‘ಓಷನ್‌ ಲವ್‌' ಹೆಸರಿನ ಈ ಕಾರ್ಯ ಕ್ರಮದಲ್ಲಿ ಉದಯ ಸಮುದ್ರ ಹೋಟೆಲ್‌ನ ಮುಖ್ಯಸ್ಥೆ ಹೇಮಾ ಮೆನನ್‌, ಟಿಸಿಎಸ್‌ನ ದಿನೇಶ್‌ ಪಿ.ಥಂಪಿ, ಏವೋನ್‌ ಮೊಬಿಲಿಟಿಯ ರೋನಿ, ನಿಯೋಲಾಜಿಕ್ಸ್‌ನ ಶ್ಯಾಮ್‌, ಯುಡಿಎಸ್‌ ಗ್ರೂಪ್‌ ಆಫ್‌ ಹೋಟೆಲ್‌ನ ರಾಜ್‌ಗೋಪಾಲ್‌ ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ