ಸಿಎಜಿ ಇಂಪ್ಯಾಕ್ಟ್..! ಕ್ಷಿಪ್ರ ಗತಿಯಲ್ಲಿ ಯುದ್ಧೋಪಕರಣ ಸಂಗ್ರಹಕ್ಕೆ ಕೇಂದ್ರ ಸಂಕಲ್ಪ

Published : Jul 23, 2017, 08:08 AM ISTUpdated : Apr 11, 2018, 12:55 PM IST
ಸಿಎಜಿ ಇಂಪ್ಯಾಕ್ಟ್..! ಕ್ಷಿಪ್ರ ಗತಿಯಲ್ಲಿ ಯುದ್ಧೋಪಕರಣ ಸಂಗ್ರಹಕ್ಕೆ ಕೇಂದ್ರ ಸಂಕಲ್ಪ

ಸಾರಾಂಶ

ಸೇನಾ ಟ್ಯಾಂಕ್‌'ಗಳು ಹಾಗೂ ಫಿರಂಗಿಗಳಿಗೆ ಬೇಕಾದ ಅತ್ಯಂತ ಪ್ರಮುಖವಾದ ಶಸ್ತ್ರಾಸ್ತ್ರಗಳು ಮುಂದಿನ ಮಾಸಾರಂಭದಿಂದ ಸೇನಾ ಬತ್ತಳಿಕೆ ಸೇರಲಿವೆ ಎಂದು ವಾಹಿನಿಯೊಂದು ವರದಿ ಮಾಡಿದೆ.

ನವದೆಹಲಿ: ಸಿಕ್ಕಿಂ ಸಮೀಪದ ವಿವಾದಿತ ಡೋಕ್ಲಾಮ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಮಹಾಲೇಖಪಾಲರು ಭಾರತದ ಬಳಿ 10 ದಿನದ ಯುದ್ಧಕ್ಕಾಗುವಷ್ಟು ಮಾತ್ರ ಶಸ್ತ್ರಾಸ್ತ್ರಗಳು ಇವೆ ಎಂದು ವರದಿ ನೀಡಿದ್ದಾರೆ. ಈ ನಡುವೆಯೇ, ದೀರ್ಘಕಾಲಿನ ಯುದ್ಧ ನಡೆಸಲು ಬೇಕಾಗುವಷ್ಟು ಶಸ್ತ್ರಾಸ್ತ್ರಗಳನ್ನು ಸೇನೆಗೆ ಪೂರೈಸುವ ಕೆಲಸ ಆರಂಭವಾಗಿದೆ.

ಸೇನಾ ಟ್ಯಾಂಕ್‌'ಗಳು ಹಾಗೂ ಫಿರಂಗಿಗಳಿಗೆ ಬೇಕಾದ ಅತ್ಯಂತ ಪ್ರಮುಖವಾದ ಶಸ್ತ್ರಾಸ್ತ್ರಗಳು ಮುಂದಿನ ಮಾಸಾರಂಭದಿಂದ ಸೇನಾ ಬತ್ತಳಿಕೆ ಸೇರಲಿವೆ ಎಂದು ವಾಹಿನಿಯೊಂದು ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೇನಾ ಮೂಲಗಳು, ಆಗಸ್ಟ್ ಆರಂಭದಿಂದಲೇ ಸೇನೆಗೆ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ. ದೀರ್ಘಾವಧಿ ಘೋರ ಯುದ್ಧ ಎದುರಿಸಲು 40 ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳ ದಾಸ್ತಾನು ಇರಬೇಕಾಗುತ್ತದೆ. ಮುಂದಿನ ವರ್ಷಾಂತ್ಯದೊಳಗೆ ಆ ಗುರಿಯನ್ನು ಸೇನೆ ತಲುಪಲಿದೆ ಎಂದು ಹೇಳಿವೆ ಎಂದು ಎನ್‌'ಡಿಟೀವಿ ವರದಿ ಮಾಡಿದೆ.

ಹಲವಾರು ಬಗೆಯ ಶಸ್ತ್ರಾಸ್ತ್ರಗಳು ಹಾಗೂ ಫ್ಯೂಸ್‌'ಗಳ ಕೊರತೆ ಸೇನೆಗೆ ಇತ್ತು. ಈಗ ಅವುಗಳು ಸರಬರಾಜು ಪೂರ್ವ ಪರಿಶೀಲನಾ ಹಂತದಲ್ಲಿವೆ. ವಿದೇಶಿ ಪೂರೈಕೆದಾರರು ಅವನ್ನು ರಫ್ತು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?