ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದವರು ಅಂದರ್

Published : Sep 24, 2016, 06:59 AM ISTUpdated : Apr 11, 2018, 12:42 PM IST
ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದವರು ಅಂದರ್

ಸಾರಾಂಶ

ಬೆಂಗಳೂರು(ಸೆ.24):​​ ಮಾರಾಕಾಸ್ತ್ರಗಳನ್ನು ತೋರಿಸಿ ಹಫ್ತ ವಸೂಲಿ ಮಾಡಿ ಪರಾರಿಯಾಗಿದ್ದ ಖಧೀಮರನ್ನ ಅಂದರ್​​​​ ಮಾಡುವಲ್ಲಿ  ಅತ್ತಿಬೆಲೆ ಪೊಲೀಸ್​ ಇನ್ಸ್​ಪೆಕ್ಟರ್​​​​​  ಟಿ.ಆರ್​​.ಶ್ರೀನಿವಾಸ್​​ ಅಂಡ್​​​​ ಟಿಂ ಯಶಸ್ವಿಯಾಗಿದ್ದಾರೆ.  

ಕಟೇಶ  ಅಲಿಯಾಸ್​​ ಕಟ್ಟೆ ,  ಎನ್​​​.ಬಾಬು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಾದ ವೆಂಕಟೇಶ್​​ ಮತ್ತು  ಎನ್​​ ಬಾಬು,  ಸ್ನೇಹಿತ ರೋಹಿತ್​​​​ನ​​​ ಜೊತೆಗೂಡಿ  ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. 

ಈ ಟೀಮ್ ಕಳೆದ 20 ನೇ ತಾರೀಖಿನಿಂದು ಅತ್ತಿಬೆಲೆಯ ಬಳಗಾರನಹಳ್ಳಿ ಬಳಿಯಿರುವ ರೋಹಿತ್​​​ ಇಂಡಸ್ಟ್ರೀಸ್​​​ ಎಂಬ ಪ್ಯಾಕ್ಟರಿಗೆ ನುಗ್ಗಿ,  ಫ್ಯಾಕ್ಟರಿಯ ಮಾಲೀಕನಿಗೆ ಮಾರಾಕಾಸ್ತ್ರಗಳನ್ನು ತೋರಿಸುವ ಮೂಲಕ ಹೆದರಿಸಿ ಮಾಲೀಕನಿಂದ 5 ಸಾವಿರ  ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. 

ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಫ್ಯಾಕ್ಟರಿಯಲ್ಲಿ ಸಿಕ್ಕ ಸಿಸಿಟಿವಿ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ  ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದು, ಆ ಸಿಸಿಟಿವಿ ವಿಶುಯಲ್ಸ್​​​ ಈಗ ಸುವರ್ಣ ನ್ಯೂಸ್​​​'ಗೆ ಲಭ್ಯವಾಗಿದೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದ್ಯಾರ್ಥಿಗಳೇ ತಂತ್ರಜ್ಞಾನ ಯುಗದಲ್ಲಿ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಿ: ರಶ‍್ಮಿ ಮಹೇಶ್
ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಇನ್ನು 10 ಗಂಟೆ ಮುಂಚಿತವಾಗಿ ವೇಟಿಂಗ್‌ ಲಿಸ್ಟ್‌/RAC ಟಿಕೆಟ್‌ ಸ್ಟೇಟಸ್‌ ಚೆಕ್‌ ಮಾಡಬಹುದು..!