ಬೆಂಗಳೂರು(ಸೆ.24): ಮಾರಾಕಾಸ್ತ್ರಗಳನ್ನು ತೋರಿಸಿ ಹಫ್ತ ವಸೂಲಿ ಮಾಡಿ ಪರಾರಿಯಾಗಿದ್ದ ಖಧೀಮರನ್ನ ಅಂದರ್ ಮಾಡುವಲ್ಲಿ ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಅಂಡ್ ಟಿಂ ಯಶಸ್ವಿಯಾಗಿದ್ದಾರೆ.
ಕಟೇಶ ಅಲಿಯಾಸ್ ಕಟ್ಟೆ , ಎನ್.ಬಾಬು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಾದ ವೆಂಕಟೇಶ್ ಮತ್ತು ಎನ್ ಬಾಬು, ಸ್ನೇಹಿತ ರೋಹಿತ್ನ ಜೊತೆಗೂಡಿ ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಟೀಮ್ ಕಳೆದ 20 ನೇ ತಾರೀಖಿನಿಂದು ಅತ್ತಿಬೆಲೆಯ ಬಳಗಾರನಹಳ್ಳಿ ಬಳಿಯಿರುವ ರೋಹಿತ್ ಇಂಡಸ್ಟ್ರೀಸ್ ಎಂಬ ಪ್ಯಾಕ್ಟರಿಗೆ ನುಗ್ಗಿ, ಫ್ಯಾಕ್ಟರಿಯ ಮಾಲೀಕನಿಗೆ ಮಾರಾಕಾಸ್ತ್ರಗಳನ್ನು ತೋರಿಸುವ ಮೂಲಕ ಹೆದರಿಸಿ ಮಾಲೀಕನಿಂದ 5 ಸಾವಿರ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಫ್ಯಾಕ್ಟರಿಯಲ್ಲಿ ಸಿಕ್ಕ ಸಿಸಿಟಿವಿ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದು, ಆ ಸಿಸಿಟಿವಿ ವಿಶುಯಲ್ಸ್ ಈಗ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.