ಗಣಿತ ಕಷ್ಟ ಎನ್ನು​ವ​ವ​ರಿಗೆ ‘ಸುಲಭ’ ಪ್ರಶ್ನೆ​ಪ​ತ್ರಿ​ಕೆ?

Published : Jun 01, 2018, 11:45 AM IST
ಗಣಿತ ಕಷ್ಟ ಎನ್ನು​ವ​ವ​ರಿಗೆ ‘ಸುಲಭ’ ಪ್ರಶ್ನೆ​ಪ​ತ್ರಿ​ಕೆ?

ಸಾರಾಂಶ

ಗಣಿತ ಎಂಬುದು ಕಬ್ಬಿ​ಣದ ಕಡಲೆ ಎಂದು ದೂರುವ ವಿದ್ಯಾ​ರ್ಥಿ​ಗ​ಳಿ​ಗಾಗಿ ಪರಿ​ಹಾ​ರ​ವೊಂದನ್ನು ಹುಡುಕಲು ಕೇಂದ್ರೀಯ ಮಾಧ್ಯ​ಮಿಕ ಶಿಕ್ಷಣ ಮಂಡಳಿ (ಸಿ​ಬಿ​ಎ​ಸ್‌​ಇ) ಮುಂದಾ​ಗಿದೆ. ಉನ್ನತ ಶಿಕ್ಷ​ಣ​ದಲ್ಲಿ ಗಣಿತ ವ್ಯಾಸಂಗ ಮಾಡುವ ಉದ್ದೇ​ಶ​ವಿ​ಲ್ಲದ ವಿದ್ಯಾ​ರ್ಥಿ​ಗ​ಳಿ​ಗಾಗಿ ‘ಸುಲ​ಭ’ ಹಾಗೂ ಗಣಿ​ತ​ವನ್ನೊ​ಳ​ಗೊಂಡ ಉನ್ನತ ಶಿಕ್ಷ​ಣದ ಮೊರೆ ಹೋಗು​ವ​ವ​ರಿ​ಗಾಗಿ ‘ಕಠಿ​ಣ’ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂಬ ಪ್ರಸ್ತಾ​ವ​ನೆ​ಯನ್ನು ಗಂಭೀ​ರ​ವಾಗಿ ಪರಿ​ಶೀ​ಲಿ​ಸು​ತ್ತಿ​ದೆ

ನವ​ದೆ​ಹ​ಲಿ(ಜೂ.01): ಗಣಿತ ಎಂಬುದು ಕಬ್ಬಿ​ಣದ ಕಡಲೆ ಎಂದು ದೂರುವ ವಿದ್ಯಾ​ರ್ಥಿ​ಗ​ಳಿ​ಗಾಗಿ ಪರಿ​ಹಾ​ರ​ವೊಂದನ್ನು ಹುಡುಕಲು ಕೇಂದ್ರೀಯ ಮಾಧ್ಯ​ಮಿಕ ಶಿಕ್ಷಣ ಮಂಡಳಿ (ಸಿ​ಬಿ​ಎ​ಸ್‌​ಇ) ಮುಂದಾ​ಗಿದೆ. ಉನ್ನತ ಶಿಕ್ಷ​ಣ​ದಲ್ಲಿ ಗಣಿತ ವ್ಯಾಸಂಗ ಮಾಡುವ ಉದ್ದೇ​ಶ​ವಿ​ಲ್ಲದ ವಿದ್ಯಾ​ರ್ಥಿ​ಗ​ಳಿ​ಗಾಗಿ ‘ಸುಲ​ಭ’ ಹಾಗೂ ಗಣಿ​ತ​ವನ್ನೊ​ಳ​ಗೊಂಡ ಉನ್ನತ ಶಿಕ್ಷ​ಣದ ಮೊರೆ ಹೋಗು​ವ​ವ​ರಿ​ಗಾಗಿ ‘ಕಠಿ​ಣ’ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂಬ ಪ್ರಸ್ತಾ​ವ​ನೆ​ಯನ್ನು ಗಂಭೀ​ರ​ವಾಗಿ ಪರಿ​ಶೀ​ಲಿ​ಸು​ತ್ತಿ​ದೆ.
ದೇಶದ ವಿವಿಧ ಶಾಲೆ​ಗಳು ಹಾಗೂ ಪ್ರಾಂಶು​ಪಾ​ಲ​ರ ಮನ​ವಿ​ಯನ್ನು ಸ್ವೀಕ​ರಿ​ಸಿ​ರುವ ಸಿಬಿ​ಎ​ಸ್‌ಇ, 9, 10, 11 ಹಾಗೂ 12ನೇ ತರ​ಗ​ತಿಯ ಗಣಿತ ಪರೀಕ್ಷೆ ವೇಳೆ ಎರಡು ರೀತಿಯ ಪ್ರಶ್ನೆ ಪತ್ರಿ​ಕೆ​ಗ​ಳನ್ನು ರೂಪಿ​ಸುವ ಕುರಿತು ಆಲೋ​ಚ​ನೆ​ಯಲ್ಲಿ ತೊಡ​ಗಿದೆ ಎಂದು ಮೂಲ​ಗಳು ತಿಳಿ​ಸಿ​ವೆ.
ವೈದ್ಯ​ಕೀಯ ಹಾಗೂ ಅರ್ಥ​ಶಾ​ಸ್ತ್ರ​ದಂತಹ ಕೋರ್ಸ್‌​ಗ​ಳನ್ನು ಉನ್ನ​ತ ಶಿಕ್ಷ​ಣ​ದಲ್ಲಿ ಕಲಿ​ಯ​ಬೇಕು ಎಂಬ ಉದ್ದೇಶ ಹೊಂದಿ​ರು​ವ​ವ​ರಿಗೆ ಅತ್ಯು​ನ್ನತ ದರ್ಜೆಯ ಗಣಿತ ವ್ಯಾಸಂಗದ ಅಗ​ತ್ಯ​ವಿ​ರು​ವು​ದಿಲ್ಲ. ಆದರೂ ಪ್ರೌಢ​ಶಾಲಾ ಹಂತ​ದಲ್ಲಿ ಒಂದೇ ರೀತಿಯ ಪ್ರಶ್ನೆ​ಪ​ತ್ರಿ​ಕೆ​ಗ​ಳನ್ನು ರೂಪಿ​ಸ​ಲಾ​ಗು​ತ್ತಿ​ರು​ವು​ದ​ರಿಂದ, ಗಣಿ​ತದ ಬಗ್ಗೆ ಆಸಕ್ತಿ ಇಲ್ಲದ ವಿದ್ಯಾ​ರ್ಥಿ​ಗಳು ಸಮಸ್ಯೆ ಎದು​ರಿ​ಸು​ತ್ತಿ​ದ್ದಾರೆ. ಬೇರೆಲ್ಲ ವಿಷ​ಯ​ಗ​ಳಲ್ಲಿ ಉತ್ತಮ ಅಂಕ ಗಳಿ​ಸಿ​ದರೂ, ಗಣಿ​ತ​ದಲ್ಲಿ ಪಡೆ​ಯುವ ಕಡಿಮೆ ಅಂಕ​ಗ​ಳಿಂದಾಗಿ ಅವರ ಒಟ್ಟಾರೆ ಸಾಧ​ನೆಯೇ ತಗ್ಗು​ತ್ತಿದೆ. ಹೀಗಾಗಿ ಎರಡು ರೀತಿಯ ಪ್ರಶ್ನೆ ಪತ್ರಿ​ಕೆ​ಗ​ಳನ್ನು ಪ್ರೌಢ​ಶಾಲಾ ಹಂತ​ದಲ್ಲಿ ರೂಪಿ​ಸುವ ಕುರಿತು ಸಿಬಿ​ಎ​ಸ್‌ಇ ಚಿಂತನೆ ನಡೆ​ಸು​ತ್ತಿದೆ ಎಂದು ಹೇಳ​ಲಾ​ಗಿದೆ. ಈ ಕ್ರಮಕ್ಕೆ ಶಿಕ್ಷ​ಕ​ರಿಂದಲೂ ಮೆಚ್ಚುಗೆ ವ್ಯಕ್ತ​ವಾ​ಗಿದೆ. ಎರಡು ರೀತಿಯ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂದರೆ ಎರಡು ಪಠ್ಯ​ಕ್ರ​ಮ​ವನ್ನೇ ಸಿದ್ಧ​ಪ​ಡಿ​ಸ​ಬೇ​ಕಾ​ಗು​ತ್ತದೆ ಎಂದು ಈ ವಿಷ​ಯದ ಬಗ್ಗೆ ಮಾಹಿತಿ ಇರುವ ವ್ಯಕ್ತಿ​ಯೊಬ್ಬರು ತಿಳಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ