
ನವದೆಹಲಿ (ಡಿ.28): ರೈಲ್ವೆಯ ತತ್ಕಾಲ್ ರಿಸರ್ವೇಶನ್ ವ್ಯವಸ್ಥೆಯನ್ನು ತಿರುಚುವ ಅಕ್ರಮ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದ ತನ್ನ ಸಾಫ್ಟ್ವೇರ್ ಪ್ರೋಗ್ರಾಮರ್ ಅನ್ನು ಸಿಬಿಐ ಬಂಧಿಸಿದೆ.
ಒಂದೇ ಸಲಕ್ಕೆ ನೂರಾರು ಟಿಕೆಟ್ಗಳನ್ನು ಬುಕ್ ಮಾಡಬಹುದಾದ ವ್ಯವಸ್ಥೆಯುಳ್ಳ ಅಕ್ರಮ ಸಾಫ್ಟ್ವೇರ್ ರಚಿಸಿದ್ದ ಬಗ್ಗೆ ಆಪಾದನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2007-11ರ ನಡುವೆ ನಾಲ್ಕು ವರ್ಷಗಳ ಕಾಲ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ (ಐಆರ್ಸಿಟಿಸಿ)ದಲ್ಲಿ ಕಾರ್ಯ ನಿರ್ವಹಿಸಿದ್ದ ಸಿಬಿಐ ಸಹಾಯಕ ಪ್ರೋಗ್ರಾಮರ್ ಅಜಯ್ ಗರ್ಗ್, ರೈಲ್ವೆ ಟಿಕೆಟಿಂಗ್ ವ್ಯವ ಸ್ಥೆಯ ದೌರ್ಬಲ್ಯಗಳನ್ನು ತಿಳಿದು, ಈ ಸಾಫ್ಟ್ವೇರ್ ಮಾಡಿದ್ದ. ಗರ್ಗ್ ಜೊತೆಗೆ ಇನ್ನೋರ್ವ ಖಾಸಗಿ ವ್ಯಕ್ತಿ ಅನಿಲ್ ಗುಪ್ತಾ ಎಂಬಾತನನ್ನೂ ಬಂಧಿಸಲಾಗಿದೆ. ಈತ ಈ ಸಾಫ್ಟ್ವೇರ್ ಅನ್ನು ಏಜೆಂಟ್ಗಳಿಗೆ ಮಾರಾಟ ಮಾಡಿದ್ದಾನೆ.
ಜೌನ್ಪುರದಲ್ಲಿ ಏಳು ಮತ್ತು ಮುಂಬೈಯಲ್ಲಿ ಮೂರು ಏಜೆಂಟರು ಈ ಸಾಫ್ಟ್ವೇರ್ ಪಡೆದಿ ರುವುದನ್ನು ಗುರುತಿಸಲಾಗಿದೆ. ಒಂದೇ ಬಾರಿ ನೂರಾರು ಟಿಕೆಟ್ಗಳನ್ನು ಬುಕ್ ಮಾಡ ಬಹುದಾದ ಸಾಫ್ಟ್ವೇರ್ ಇದಾಗಿದ್ದು, ನಿಜ ವಾದ ಪ್ರಯಾಣಿಕರು ಇದರಿಂದ ವಂಚಿತರಾಗುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.