
ಹೈದ್ರಾಬಾದ್[ಸೆ.2] ತನಗೆ ಹೋಟೆಲ್ ನೀಡಿದ್ದ ವೆಜ್ ಬಿರಿಯಾನಿಯಲ್ಲಿ ಕಂಬಳಿ ಹುಳ ಕಂಡು ಬಂದ ನಂತರ ಕಂಗಾಲಾದ ಗ್ರಾಹಕ ಆಹಾರ ಸುರಕ್ಷತಾ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಇದಾದ ಮೇಲೆ ಆಹಾರ ಸುರಕ್ಷತಾ ದಳದ ಅಧಿಕಾರಿಗಳು ಐಕೆಇಎಯ ರೆಸ್ಟೋರೆಂಟ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಹೋಟೆಲ್ ನ ಆಹಾರದ ಮಾದರಿಗಳನ್ನು ಲ್ಯಾಬ್ ಗೆ ಕೊಂಡೊಯ್ದಿದ್ದಾರೆ.
ಜತೆಗೆ 11500 ರೂ. ದಂಡ ವಿಧಿಸಿದ್ದು ಹೋಟೆಲ್ ಮ್ಯಾನೇಜರ್ ನೋಟಿಸ್ ನೀಡಿದ್ದಾರೆ. ಪುಣೆಯಲಲ್ಿರುವ ಹಲ್ದಿರಾಮ್ಸ್ ವೆಜಿಟೆಬಲ್ ಬಿರಿಯಾನಿ ಸಂಸ್ಥೆಗೂ ನೋಟಿಸ್ ನೀಡಲಾಗಿದೆ.
ಐಕೆಇಎ ರೆಸ್ಟೋರೆಂಟ್ 1000 ಜನರಿಗೆ ಏಕಕಾಲದಲ್ಲಿ ಆಹಾರ ಸೇವೆ ನೀಡುವ ಶಕ್ತಿ ಹೊಂದಿದೆ. ಕಾಫಿ, ಬಿಸ್ಕಟ್ ಸೇರಿದಂತೆ ಅನೇಕ ಪ್ರಾಡಕ್ಟ್ ಗಳನ್ನು ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.