
ಬೆಂಗಳೂರು (ಏ.21): ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರತಿ ತಿಂಗಳು ಬೇರೆ ಬೇರೆ ವಿಷಯಗಳ ಮೇಲೆ ಫೋಟೋಗ್ರಾಫಿ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಕರ್ನಾಟಕದ ಪ್ರಾಕೃತಿಕ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳನ್ನು ಫೋಟೋಗ್ರಾಫಿ ಪ್ರಿಯರಿಂದ ಆಹ್ವಾನಿಸಿದೆ.
ಯೂತ್ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಿಂದ ಆಯೋಜಿಸಲಾಗುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದವರಿಗೆ ರೂ.10000 ನಗದು ಬಹುಮಾನ ಸಿಗಲಿದೆ. ದ್ವಿತೀಯ ಸ್ಥಾನ ಪಡೆದವರಿಗೆ ರೂ.5000 ನಗದು ಬಹುಮಾನ ಸಿಗಲಿದೆ.
ಈ ಮುಂಚೆ ರಾಜ್ಯದ ದೇವಸ್ಥಾನಗಳು, ಬೀಚ್’ಗಳು ಹಾಗೂ ವನ್ಯಜೀವಿಗಳ ಫೋಟೋ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಿಂಗಳ ಸ್ಪರ್ಧೆಯ ಫೋಟೋಗಳನ್ನು ಸಲ್ಲಿಸಲು ಏ.30 ಕೊನೆಯ ದಿನಾಂಕವಾಗಿದ್ದು, ಮೇ.3ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಮೊದಲ ಬಾರಿ ಭಾಗವಹಿಸುವವರು ಇಲಾಖೆಯಲ್ಲಿ ತಮ್ ಹೆಸರನ್ನು ನೋಂದಾಯಿಸಬೇಕು. ಬಳಿಕ ತಮ್ಮ ಲಾಗಿನ್ ವಿವರಗಳನ್ನು ಬಳಸಿ ಫೋಟೋಗಳನ್ನು ಸಲ್ಲಿಸಬೇಕು. ಫೋಟೋ ಕಳುಹಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳ ವಿವರ ಇಲ್ಲಿದೆ: http://contest.ypsbengaluru.com/
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.