ಸಚಿವ ದೇಶಪಾಂಡೆ ಕಾರಿಗೆ ದಾರಿ ಬಿಡದ ಚಾಲಕನ ವಿರುದ್ಧ ಕೇಸ್‌?

By Web DeskFirst Published Jun 15, 2019, 9:02 AM IST
Highlights

ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರ ಕಾರಿಗೆ ದಾರಿ ಬಿಡದ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. 

ಧಾರವಾಡ [ಜೂ.15] :  ಕಂದಾಯ ಸಚಿವ ಆರ್‌.ವಿ.ದೇಶ​ಪಾಂಡೆ ಅವರ ಕಾರಿಗೆ ದಾರಿ ಬಿಡಲು ವಿಳಂಬ ಮಾಡಿದ ಆರೋ​ಪದ ಮೇಲೆ ಸಾರಿಗೆ ಬಸ್‌ ಚಾಲಕನ ವಿರುದ್ಧ ಪ್ರಕ​ರಣ ದಾಖ​ಲಿ​ಸಲು ಸಚಿ​ವರ ಆಪ್ತ ಕಾರ್ಯ​ದರ್ಶಿ ಸೂಚನೆ ನೀಡಿದ ಘಟನೆ ಶುಕ್ರವಾರ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಹಳೆ ಬಸ್‌ನಿಲ್ದಾಣ ಮುಂಭಾಗ ಈ ಘಟನೆ ನಡೆದಿದೆ. ಹೊಸವಾಳಕ್ಕೆ ಹೊರಟಿದ್ದ ಬಸ್‌, ನಿಲ್ದಾಣದಿಂದ ಹೊರ ಬರುವ ವೇಳೆ ಏಕಾಏಕಿ ದೇಶಪಾಂಡೆ ಅವರ ವಾಹನ ಬಂದಿದೆ. 

ಇದನ್ನು ಗಮ​ನಿ​ಸದ ಚಾಲಕ ಬಸ್‌ ಚಾಲನೆ ಮಾಡಿದ್ದಾರೆ. ಈ ವೇಳೆ ಸಚಿವರ ವಾಹನಕ್ಕೆ ದಾರಿ ಬಿಡಲಿಲ್ಲ ಎಂದು ಕೋಪದಿಂದ ಸಚಿವರ ಆಪ್ತ ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜತೆಗೆ ಬಸ್‌ ಚಾಲಕನ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ ಎಂದೂ ತಿಳಿದು ಬಂದಿದೆ.

click me!