ಉಚಿತ ಮೆಟ್ರೋ ಪ್ರಯಾಣ ಬೇಡ: ಕೇಜ್ರಿವಾಲ್‌ ಪ್ರಸ್ತಾಪಕ್ಕೆ ’ಮೆಟ್ರೋ ಮ್ಯಾನ್‌’ ವಿರೋಧ

Published : Jun 15, 2019, 08:55 AM IST
ಉಚಿತ ಮೆಟ್ರೋ ಪ್ರಯಾಣ ಬೇಡ: ಕೇಜ್ರಿವಾಲ್‌ ಪ್ರಸ್ತಾಪಕ್ಕೆ ’ಮೆಟ್ರೋ ಮ್ಯಾನ್‌’ ವಿರೋಧ

ಸಾರಾಂಶ

ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡ: ಮೋದಿಗೆ ಶ್ರೀಧರನ್‌ ಪತ್ರ| ಕೇಜ್ರಿವಾಲ್‌ ಪ್ರಸ್ತಾಪಕ್ಕೆ ಮೆಟ್ರೋ ಮ್ಯಾನ್‌ ವಿರೋಧ| ಮಹಿಳಾ ಪರ ಕಾಳಜಿ ಇದ್ದರೆ ನೇರವಾಗಿ ಹಣ ನೀಡಲಿ| ಉಚಿತ ಪ್ರಯಾಣ ಅವಕಾಶ ಕೆಟ್ಟಸಂಪ್ರದಾಯಕ್ಕೆ ನಾಂದಿ

ನವದೆಹಲಿ[ಜೂ.15]: ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ದೆಹಲಿಯ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಸ್ತಾಪಕ್ಕೆ ದೆಹಲಿ ಮೆಟ್ರೋ ರೈಲಿನ ರೂವಾರಿ ಇ.ಶ್ರೀಧರನ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಯೋಜನೆಗೆ ಅನುಮತಿ ನೀಡದಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಒಂದು ವೇಳೆ ದೆಹಲಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇರುವುದೇ ಹೌದಾಗಿದ್ದರೆ, ಸರ್ಕಾರ ನೇರವಾಗಿ ಮಹಿಳೆಯರಿಗೇ ಹಣ ಪಾವತಿ ಮಾಡಲಿ. ಅದು ಬಿಟ್ಟು ಮೆಟ್ರೋದಲ್ಲಿ ಉಚಿತ ಪ್ರಯಾಣದ ಆಫರ್‌ ನೀಡುವುದು ಸರಿಯಲ್ಲ. 2002ರಲ್ಲಿ ದೆಹಲಿಯಲ್ಲಿ ಮೊದಲ ಮೆಟ್ರೋ ಸೇವೆ ಆರಂಭವಾದಾಗಲೇ, ಇದರಲ್ಲಿ ಎಂದಿಗೂ ಯಾರಿಗೂ, ಉಚಿತ ಅಥವಾ ರಿಯಾಯಿತಿ ದರದ ಪ್ರಯಾಣದ ಅವಕಾಶ ನೀಡಬಾರದು ಎಂದು ನಿರ್ಧರಿಸಲಾಗಿತ್ತು.

ಒಂದು ವೇಳೆ ದೆಹಲಿಯಲ್ಲಿ ಉಚಿತ ಪ್ರಯಾಣದ ಕೆಟ್ಟಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಅದು ಇಡೀ ದೇಶದ ಇತರೆ ಮೆಟ್ರೋ ಸೇವೆಗಳ ಮೇಲೂ ಪರಿಣಾಮ ಬೀರಲಿದೆ. ದೆಹಲಿ ಮೆಟ್ರೋ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳೇ ಸ್ವತಃ ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗಿರುವಾಗ ಉಚಿತ ಪ್ರಯಾಣದ ಅವಕಾಶ ಸರಿಯಲ್ಲ. ಹೀಗಾಗಿ ಕೂಡಲೇ ತಾವು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ದೆಹಲಿ ಸರ್ಕಾರದ ಪ್ರಸ್ತಾಪವನ್ನು ಒಪ್ಪಬಾರದು’ ಎಂದು ಶ್ರೀಧರನ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

2020ರಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ನಡೆಯಲಿದೆ. ಹೀಗಾಗಿ ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಕೇಜ್ರಿವಾಲ್‌ ಅವರು ಕೆಲ ದಿನಗಳ ಹಿಂದೆ ಮೆಟ್ರೋ ಮತ್ತು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾಪ ಮುಂದಿಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!