ಭಯೋತ್ಪಾದನಾ ಬೆದರಿಕೆ ವರದಿಯಿಂದ ಸಿಖ್ ಉಗ್ರವಾದ ಪದ ಕೈಬಿಟ್ಟ ಕೆನಡಾ!

Published : Apr 14, 2019, 05:22 PM ISTUpdated : Apr 14, 2019, 05:28 PM IST
ಭಯೋತ್ಪಾದನಾ ಬೆದರಿಕೆ ವರದಿಯಿಂದ ಸಿಖ್ ಉಗ್ರವಾದ ಪದ ಕೈಬಿಟ್ಟ ಕೆನಡಾ!

ಸಾರಾಂಶ

ಭಯೋತ್ಪಾದನೆ ಬೆದರಿಕೆ ಕುರಿತು ತಾನೇ ತಯಾರಿಸಿದ್ದ ವರದಿ ಬದಲಿಸಿದ ಕೆನಡಾ| ವರದಿಯಿಂದ ಸಿಖ್ ಉಗ್ರವಾದ, ಖಲಿಸ್ತಾನ್ ಪದ ಕೈಬಿಟ್ಟ ಕೆನಾಡಾ ಸರ್ಕಾರ| ಸರ್ಕಾರದ ವರದಿಗೆ ಕೆರಳಿದ್ದ ಕೆನಾಡಾ ಸಿಖ್ ಸಮುದಾಯ| ಒತ್ತಡಕ್ಕೆ ಮಣಿದು ಸಿಖ್ ಉಗ್ರವಾದ, ಖಲಿಸ್ತಾನ್ ಪದ ಕೈಬಿಟ್ಟ ಕೆನಡಾ|

ಟೋರೊಂಟೋ(ಏ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಭಯೋತ್ಪಾದನಾ ಬೆದರಿಕೆಗಳ ಕುರಿತು ತಾನು ತಯಾರಿಸಿದ್ದ 2018ರ ವರದಿಯಿಂದ, ಸಿಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ.

2018 ರ ಕೆನಡಾದ ಭಯೋತ್ಪಾದನಾ ಹಾನಿಯ ಕುರಿತಾದ ಸಾರ್ವಜನಿಕ ವರದಿ'ಯಿಂದ ಸಿಖ್ ಉಗ್ರವಾದಿತ್ವ ಹಾಗೂ ಖಲಿಸ್ತಾನ ಉಗ್ರರ ಉಲ್ಲೇಖವನ್ನು ಕೆನಡಾ ಕೈಬಿಟ್ಟಿದೆ.

ಭಯೋತ್ಪಾದನಾ ಬೆದರಿಕೆಗಳ ಕುರಿತಾದ ಕೆನಡಾದ ವರದಿ ಅಲ್ಲಿನ ಸಿಖ್‌ರನ್ನು ಕೆರಳಿಸಿತ್ತು. ಅಲ್ಲದೇ ಈ ವರದಿಯನ್ನು ಹಿಂಪಡೆಯುವಂತೆ ಕೆನಡಾದ ಸಿಖ್ ಸಂಘಟನೆಗಳು ಒತ್ತಾಯಿಸಿದ್ದವು.

ಅದರಂತೆ ಸಿಖ್ ಸಮುದಾಯದ ಒತ್ತಡಕ್ಕೆ ಮಣಿದಿರುವ ಸರ್ಕಾರ, ವರದಿಯಿಂದ ಸಿಖ್ ಉಗ್ರಗಾಮಿತ್ವ ಮತ್ತು ಖಲಿಸ್ತಾನ್ ಪದಗಳನ್ನು ಅಳಿಸಿ ಹಾಕಿದೆ. ಆದರೆ 'ಭಾರತದೊಳಗೆ ಸ್ವತಂತ್ರ ರಾಜ್ಯ ಸ್ಥಾಪಿಸಲು ಹಿಂಸಾಚಾರ ಬೆಂಬಲಿಸುವ ಉಗ್ರರು' ಎಂಬ ಹೊಸ ಪದ ಸೇರಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?