ಪ್ರಾಣಿವಧಾ ನಿಷೇಧ ಪಟ್ಟಿಯಿಂದ ಎಮ್ಮೆಯನ್ನು ಕೈಬಿಟ್ಟ ಕೇಂದ್ರ ಪರಿಸರ ಸಚಿವಾಲಯ

Published : May 29, 2017, 09:31 PM ISTUpdated : Apr 11, 2018, 01:09 PM IST
ಪ್ರಾಣಿವಧಾ ನಿಷೇಧ ಪಟ್ಟಿಯಿಂದ ಎಮ್ಮೆಯನ್ನು ಕೈಬಿಟ್ಟ ಕೇಂದ್ರ ಪರಿಸರ ಸಚಿವಾಲಯ

ಸಾರಾಂಶ

ಗೋಹತ್ಯೆ ಮಾರಾಟ ನಿಷೇಧದ ಬಗ್ಗೆ ಕೆಲವೆಡೆ ಪ್ರತಿಭಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮ್ಮೆಯನ್ನು ಪ್ರಾಣಿ ವಧಾ ನಿಷೇಧ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ.  

ನವದೆಹಲಿ (ಮೇ.29): ಗೋಹತ್ಯೆ ಮಾರಾಟ ನಿಷೇಧದ ಬಗ್ಗೆ ಕೆಲವೆಡೆ ಪ್ರತಿಭಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮ್ಮೆಯನ್ನು ಪ್ರಾಣಿ ವಧಾ ನಿಷೇಧ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ.  

ಗೋ ಮಾರಾಟ/ಹತ್ಯೆಗೆ ಸಂಬಂಧಿಸಿದಂತೆ ನಾವು ಹೊರಡಿಸಿರುವ ಸುತ್ತೋಲೆಗೆ ಸಾಕಷ್ಟು ಪರ ವಿರೋಧಗಳು ಬರುತ್ತಿವೆ. ನಾವಿದರ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ಪರಿಸರ ಸಚಿವಾಲಯದ ಕಾರ್ಯದರ್ಶಿ ಎ.ಎನ್ ಜಾ ಹೇಳಿದ್ದಾರೆ.  

ಗೋಮಾಂಸ ನಿಷೇಧ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆಯಾಗುತ್ತಿದೆ.  ಇಂದು ಬೆಳಿಗ್ಗೆ ಸಾರ್ವಜನಿಕವಾಗಿಯೇ 18 ತಿಂಗಳ ಎಮ್ಮೆ ಕರುವೊಂದನ್ನು ಹತ್ಯೆಗೈದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಶು ಮಾರುಕಟ್ಟೆಯಲ್ಲಿ ಹತ್ಯೆ ಉದ್ದೇಶದಿಂದ ಪ್ರಾಣಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಷೇಧ ಪಟ್ಟಿಯಲ್ಲಿ ಎಮ್ಮೆ ಕೂಡಾ ಇತ್ತು. ಅದನ್ನು ಈಗ ಕೈಬಿಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ