ಶಿವರಾಮಕಾರಂತ್​​ ಬಡಾವಣೆ ಪ್ರಕರಣ: ನಾಳೆ ಬಿಎಸ್'ವೈ ನಿರ್ಣಾಯ ದಿನ

Published : Sep 21, 2017, 10:30 PM ISTUpdated : Apr 11, 2018, 01:01 PM IST
ಶಿವರಾಮಕಾರಂತ್​​ ಬಡಾವಣೆ ಪ್ರಕರಣ: ನಾಳೆ ಬಿಎಸ್'ವೈ ನಿರ್ಣಾಯ ದಿನ

ಸಾರಾಂಶ

ಶಿವರಾಮಕಾರಂತ್​​ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.

ಬೆಂಗಳೂರು (ಸೆ.21): ಶಿವರಾಮಕಾರಂತ್​​ ಬಡಾವಣೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪಗೆ ನಾಳೆ ನಿರ್ಣಾಯ ದಿನ.

ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಸಲ್ಲಿಸಿರುವ ರಿಟ್​ ಅರ್ಜಿಯ ಮಧ್ಯಂತರ ಆದೇಶ ಹೊರಬೀಳಲಿದೆ. 257 ಎಕರೆ ಭೂಮಿಯನ್ನ ಡಿನೋಟಿಫಿಕೇಷನ್​ ಆರೋಪ ಎದುರಿಸುತ್ತಿದ್ದು, ಬಿಎಸ್​ವೈ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಹೈಕೋರ್ಟ್​​ನಲ್ಲಿ ವಾದಿಸಿದೆ. ಆದರೆ ಯಡಿಯೂರಪ್ಪ ಪರ ವಕೀಲರು ಇದೊಂದು ರಾಜಕೀಯ ದುರುದ್ದೇಶಪೂರಿತ ಪ್ರಕರಣ. ಬಿಎಸ್​ವೈ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ. ಸತತ ಎರಡು ವಾರಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್​ ಇಂದು ಮಧ್ಯಂತರ ಅರ್ಜಿಯ ಆದೇಶ ಪ್ರಕಟಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌