ಇನ್ನೂ ಸುಮ್ನಿರಬೇಕಾ?: ಹೇಡಿ ಪಾಕ್‌ನಿಂದ ಕತ್ತು ಸೀಳಿ ಯೋಧನ ಕಗ್ಗೊಲೆ!

Published : Sep 19, 2018, 05:31 PM IST
ಇನ್ನೂ ಸುಮ್ನಿರಬೇಕಾ?:  ಹೇಡಿ ಪಾಕ್‌ನಿಂದ ಕತ್ತು ಸೀಳಿ ಯೋಧನ ಕಗ್ಗೊಲೆ!

ಸಾರಾಂಶ

ಗಡಿಯಲ್ಲಿ ಮತ್ತೆ ಅಮಾನವೀಯ ಕೃತ್ಯ ಮೆರೆದ ಪಾಕ್! ಕತ್ತು ಸೀಳಿ ಬಿಎಸ್‌ಎಫ್ ಯೋಧನ ಕಗ್ಗೊಲೆ! ಬಿಎಸ್‌ಎಫ್ ಮುಖ್ಯ ಪೇದೆ ನರೇಂದ್ರ ಕುಮಾರ್! ಅಂತರಾಷ್ಟ್ರೀಯ ಗಡಿಯಲ್ಲಿ ಪೇದೆ ಶವ ಪತ್ತೆ! ಪಾಕ್ ಹೇಡಿ ಕೃತ್ಯಕ್ಕೆ ಭಾರತೀಯ ಸೇನೆ ಕೆಂಡಾಮಂಡಲ

ಜಮ್ಮು(ಸೆ.19): ಭಾರತದೊಂದಿಗೆ ಶಾಂತಿ ಮಾತುಕತೆ ನಾಟಕವಾಡುತ್ತಿರುವ ಪಾಕಿಸ್ತಾನ, ಗಡಿಯಲ್ಲಿ ಮತ್ತೆ ಮತ್ತೆ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ಮಾಡುವ ತನ್ನ ಹಳೆಉ ಚಾಳಿ ಬಿಡುತ್ತಿಲ್ಲ.

ಇಂದು ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು, ಕರ್ತವ್ಯನಿರತ ಬಿಎಸ್ ಎಫ್ ಯೋಧನೋರ್ವನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಇಲ್ಲಿನ ರಾಮಗಡ್ ಸಮೀಪದ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಮುಖ್ಯ ಪೇದೆ ನರೇಂದ್ರ ಕುಮಾರ್ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಪಾಕ್ ದುಸ್ಸಾಹಸ ಮತ್ತು ಅಮಾನವೀಯ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇಂತಹ ಹೇಡಿ ಕೃತ್ಯವನ್ನು ವಿಶ್ವದ ಯಾವ ಸೇನೆಯೂ ಮಾಡುವುದಿಲ್ಲ ಎಂದು ಹರಿಹಾಯ್ದಿದೆ.

ಇನ್ನು ಮುಖ್ಯ ಪೇದೆ ನರೇಂದ್ರ ಕುಮಾರ್ ಅವರ ಕತ್ತು ಸೀಳಿ ಕೊಲೆ ಮಾಡಿರುವ ಘಟನೆಯನ್ನು ಅಮಾನವೀಯ ಕೃತ್ಯ ಎಂದು ಬಣ್ಣಿಸಿರುವ ಬಿಎಸ್ ಎಫ್, ಈ ಹೇಡಿ ಕೃತ್ಯಕ್ಕೆ ಪಾಕ್ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ: ಶ್ರೀ ಶ್ರೀ ರವಿಶಂಕರ್ ಗುರೂಜಿ
ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ