ಇನ್ನೂ ಸುಮ್ನಿರಬೇಕಾ?: ಹೇಡಿ ಪಾಕ್‌ನಿಂದ ಕತ್ತು ಸೀಳಿ ಯೋಧನ ಕಗ್ಗೊಲೆ!

By Web DeskFirst Published Sep 19, 2018, 5:31 PM IST
Highlights

ಗಡಿಯಲ್ಲಿ ಮತ್ತೆ ಅಮಾನವೀಯ ಕೃತ್ಯ ಮೆರೆದ ಪಾಕ್! ಕತ್ತು ಸೀಳಿ ಬಿಎಸ್‌ಎಫ್ ಯೋಧನ ಕಗ್ಗೊಲೆ! ಬಿಎಸ್‌ಎಫ್ ಮುಖ್ಯ ಪೇದೆ ನರೇಂದ್ರ ಕುಮಾರ್! ಅಂತರಾಷ್ಟ್ರೀಯ ಗಡಿಯಲ್ಲಿ ಪೇದೆ ಶವ ಪತ್ತೆ! ಪಾಕ್ ಹೇಡಿ ಕೃತ್ಯಕ್ಕೆ ಭಾರತೀಯ ಸೇನೆ ಕೆಂಡಾಮಂಡಲ

ಜಮ್ಮು(ಸೆ.19): ಭಾರತದೊಂದಿಗೆ ಶಾಂತಿ ಮಾತುಕತೆ ನಾಟಕವಾಡುತ್ತಿರುವ ಪಾಕಿಸ್ತಾನ, ಗಡಿಯಲ್ಲಿ ಮತ್ತೆ ಮತ್ತೆ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ಮಾಡುವ ತನ್ನ ಹಳೆಉ ಚಾಳಿ ಬಿಡುತ್ತಿಲ್ಲ.

ಇಂದು ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು, ಕರ್ತವ್ಯನಿರತ ಬಿಎಸ್ ಎಫ್ ಯೋಧನೋರ್ವನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಇಲ್ಲಿನ ರಾಮಗಡ್ ಸಮೀಪದ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಮುಖ್ಯ ಪೇದೆ ನರೇಂದ್ರ ಕುಮಾರ್ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಪಾಕ್ ದುಸ್ಸಾಹಸ ಮತ್ತು ಅಮಾನವೀಯ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇಂತಹ ಹೇಡಿ ಕೃತ್ಯವನ್ನು ವಿಶ್ವದ ಯಾವ ಸೇನೆಯೂ ಮಾಡುವುದಿಲ್ಲ ಎಂದು ಹರಿಹಾಯ್ದಿದೆ.

ಇನ್ನು ಮುಖ್ಯ ಪೇದೆ ನರೇಂದ್ರ ಕುಮಾರ್ ಅವರ ಕತ್ತು ಸೀಳಿ ಕೊಲೆ ಮಾಡಿರುವ ಘಟನೆಯನ್ನು ಅಮಾನವೀಯ ಕೃತ್ಯ ಎಂದು ಬಣ್ಣಿಸಿರುವ ಬಿಎಸ್ ಎಫ್, ಈ ಹೇಡಿ ಕೃತ್ಯಕ್ಕೆ ಪಾಕ್ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಸಿದೆ.

click me!