
ಅಹ್ಮದಾಬಾದ್(ಅ. 05): ಭಾರತೀಯ ಗಡಿ ಭದ್ರತಾ ಪಡೆ ಬುಧವಾರ ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದನ್ನು ವಶಪಡಿಸಿಕೊಂಡಿದ್ದಾರೆ. ಕಚ್ಛ್ ಜಿಲ್ಲೆಯಾಚೆ ಭಾರತೀಯ ಸಾಗರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಈ ದೋಣಿಯಲ್ಲಿ 9 ಮಂದಿ ಇದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಇವರೆಲ್ಲರೂ ಮೀನುಗಾರರಾಗಿದ್ದಾರೆನ್ನಲಾಗಿದೆ. ವಶಪಡಿಸಿಕೊಂಡ ಈ ದೋಣಿಯಲ್ಲಿ ಮೀನುಗಾರಿಕೆಯ ಸಲಕರಣೆ ಹೊರತುಪಡಿಸಿ ಬೇರಾವುದೇ ವಸ್ತುಗಳು ಪತ್ತೆಯಾಗಿಲ್ಲ. ಆದರೆ, ಈ ದೋಣಿಯಲ್ಲಿದ್ದ ಜನರು ಗುಪ್ತಚಾರಿಕೆ ಕಾರ್ಯ ಮಾಡುತ್ತಿದ್ದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೆಲ ಭದ್ರತಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಇದು ಮೂರನೇ ಬಾರಿ ಪಾಕಿಸ್ತಾನದ ದೋಣಿ ಭಾರತದ ಜಲ ವ್ಯಾಪ್ತಿಗೆ ಬಂದು ಸಿಕ್ಕಿಕೊಂಡಿರುವುದು. ಗಾಂಧಿ ಜಯಂತಿಯಾದ ಅ.2ರಂದು ಪೋರ್ಬಂದರ್ ಕರಾವಳಿ ಭಾಗದಲ್ಲಿ 9 ಮಂದಿ ಇದ್ದ ಪಾಕ್ ದೋಣಿಯೊಂದನ್ನು ಕರಾವಳಿ ಕಾವಲು ಪಡೆಯವರು ಹಿಡಿದಿದ್ದರು. ನಿನ್ನೆ ಮಂಗಳವಾರ ಪಾಕಿಸ್ತಾನ್ ರೇಂಜರ್ಸ್'ಗೆ ಸೇರಿದ ಖಾಲಿ ದೋಣಿಯೊಂದು ಪಂಜಾಬ್'ನ ತೀರ ಪ್ರದೇಶದ ಬಳಿ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.