ನೋಟಿಸ್'ಗೆ ಉತ್ತರಿಸಿದ ದರ್ಶನ್ ಕುಟುಂಬ ಹಾಗೂ ಶಾಮನೂರು : ಮುಂದೇನಾಗುತ್ತೆ ?

Published : Oct 05, 2016, 01:00 PM ISTUpdated : Apr 11, 2018, 01:02 PM IST
ನೋಟಿಸ್'ಗೆ ಉತ್ತರಿಸಿದ ದರ್ಶನ್ ಕುಟುಂಬ ಹಾಗೂ ಶಾಮನೂರು : ಮುಂದೇನಾಗುತ್ತೆ ?

ಸಾರಾಂಶ

ಬೆಂಗಳೂರು(ಅ.5): ನಟ ದರ್ಶನ್​ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್​ ಎಸ್​ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ನೀಡಿದ್ದ ನೋಟಿಸ್​ಗೆ ಪ್ರತಿಷ್ಠಿತರಿಂದ ಉತ್ತರ ಸಿಕ್ಕಿದೆ. ಸರ್ಕಾರಿ ಬಿ ಖರಾಬು ಭೂಮಿ ಒತ್ತುವರಿ ಮಾಡಿ ಬೆಂಗಳೂರಿನ ರಾಜರಾಜೇಶ್ವರಿನಗರದ ಐಡಿಯಲ್​ ಹೋಮ್ಸ್ನಲ್ಲಿ 84 ಸರ್ಕಾರಿ ನಿವೇಶನಗಳು ಒತ್ತುವರಿಯಾಗಿತ್ತು. ಈ ಸಂಬಂಧ ನಗರ ಜಿಲ್ಲಾಧಿಕಾರಿಗಳು ದಾಖಲೆ ಸಮೇತ ಉತ್ತರ ನೀಡುವಂತೆ ಇಂದಿಗೆ ಗಡುವು ನೀಡಿ ನೋಟಿಸ್​ ಜಾರಿ ಮಾಡಿದ್ದರು.  ಈ ನೋಟಿಸ್​ಗೆ   ಇಬ್ಬರು ಉತ್ತರ  ನೀಡಿದ್ದಾರೆ.

ಬಿಡಿಎ ಅನುಮೋದಿತ ಲೇಔಟ್​ನಲ್ಲಿ ಮನೆ ಹಾಗೂ ಆಸ್ಪತ್ರೆ ಇದೆ. ಹೀಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರತಿ ವರ್ಷ ಕಂದಾಯ ಕಟ್ಟಿ ವಾಸವಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.   ತಪ್ಪು ನಮ್ಮದಲ್ಲ  ಎಂದು ಪರೋಕ್ಷವಾಗಿ ಬಿಡಿಎ ಕಡೆ ಬೊಟ್ಟು ಮಾಡಿದ್ದಾರೆ.

ನೋಟಿಸ್​ಗೆ ಉತ್ತರ ನೀಡಿರುವ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಬಿಡಿಎ ಅನುಮೋದನೆ ನೀಡಿ ಕಟ್ಟಿರುವ ಕಟ್ಟಡವನ್ನು ಖರೀದಿಸಿದ್ದೇವೆ. ಹಾಗಾಗಿ ತಮ್ಮಿಂದ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ, ತಾವು ಸಾರ್ವಜನಿಕರ ಸೇವೆ ಮಾಡುತ್ತಿದ್ದು , ಜಿಲ್ಲಾಡಳಿತ ತೆರವಿನಿಂದ ಆಗುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಟ್ಟು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ಮಾತನಾಡಿ, ಕಾನೂನು ಪ್ರಕಾರ ಕ್ರಮ  ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!