
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ‘ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ’ ಎಂಬ ಟೀಕೆಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ನನ್ನ ಕನಸಿನ ಯೋಜನೆಯಾದ ಕೆರೆ ತುಂಬುವ ಯೋಜನೆಯ ಪರಿಕಲ್ಪನೆ ಕಂಡು ತಾವು 2009 ರಲ್ಲಿ ಈ ಯೋಜನೆ ರಾಷ್ಟ್ರಕ್ಕೇ ಮಾದರಿ ಎಂದು ಹೇಳಿದ್ದು ನೆನಪಿಲ್ಲವೇ? ಹೀಗೇಕೆ ಸದಾ ಬಣ್ಣ ಬದಲಾಯಿಸುತ್ತೀರಿ? ಎಂದು ಎಂ.ಬಿ. ಪಾಟೀಲ್ ಟ್ವೀಟಿಸಿದ್ದಾರೆ.
ಮುಂದುವರೆದು, ಹಿರಿಯರಾದ ನಿಮಗೆ ಅರಳು-ಮರಳು ಆಗುತ್ತಿದೆ. ನಾನು ನಿಮ್ಮ ಬಗ್ಗೆ ಮಾತನಾಡುವುದಿರಲಿ, ನಿಮ್ಮದೇ ಪಕ್ಷದವರು ನಿಮ್ಮ ಬಗ್ಗೆ ಹೇಳಿರುವುದನ್ನು ನೋಡಿ ಎಂದು ಸರಣಿ ಟ್ವೀಟ್’ಗಳನ್ನು ಮಾಡಿದ್ದಾರೆ..
ನಿನ್ನೆ ವಿಜಯಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ನೀರಾವರಿ ಸಚಿವ ಎಂ.ಬಿ. ಪಾಟೀಲರು ಈ ಭಾಗದವರೇ ಆಗಿದ್ದರೂ ಯೋಜನೆಯ ಬಗ್ಗೆ ಆಸಕ್ತಿ ತೋರಲಿಲ್ಲ. ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ. ಕೆಲಸ ಮಾಡುವುದು ಬಿಟ್ಟು ನನ್ನ ಹಗರಣ ಬಯಲು ಮಾಡುತ್ತೇನೆ ಎಂದು ಪೊಳ್ಳು ಸವಾಲು ಹಾಕಿಕೊಂಡು ಓಡಾಡುತ್ತಾರೆ, ಎಂದು ಟೀಕಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.