
ಜಮ್ಮು[ಜು.24]: ಕಳೆದ ವರ್ಷ ಜೂನ್ 14ರಂದು ಈದ್ಮಿಲಾದ ಆಚರಣೆಗೆಂದು ಮನೆಗೆ ಬಂದಿದ್ದ ವೇಳೆ ಉಗ್ರರಿಂದ ಹತ್ಯೆಯಾಗಿದ ಯೋಧ ಔರಂಗಜೇಬ್ನ ಇಬ್ಬರೂ ಸೋದರರು ಇದೀಗ ಭಾರತೀಯ ಸೇನೆಗೆ ಸೇರಿದ್ದಾರೆ. ಜೊತೆಗೆ ತಮ್ಮ ಅಣ್ಣನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.
ಔರಂಗಜೇಬ್ರ ಸಹೋದರರಾದ ಮೊಹಮ್ಮದ್ ತಾರೀಖ್(23) ಮತ್ತು ಮೊಹಮ್ಮದ್ ಶಬೀರ್(21) ರಜೋರಿ ಘಟಕದ ಸೇನೆಯಲ್ಲಿ ನೋಂದಣಿಯಾಗಿದ್ದು, ಅವರಿಗೆ ಪಂಜಾಬ್ ರೆಜಿಮೆಂಟ್ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.
ಸೇನೆ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ತಾರಿಖ್, ‘ದೇಶಕ್ಕಾಗಿ ನಮ್ಮ ಅಣ್ಣ ಪ್ರಾಣವನ್ನೇ ತ್ಯಾಗ ಮಾಡಿದ. ಅವರ ಹಾದಿಯಲ್ಲೇ ನಾವು ಸಾಗುತ್ತೇವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸಂದರ್ಭ ಒದಗಿ ಬಂದರೂ ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನ್ನ ಅಣ್ಣ ಹಾಗೂ ಪಂಜಾಬ್ ರೆಜಿಮೆಂಟ್ ಹೆಮ್ಮೆ ಪಡುವಂತೆ ಸೇವೆ ಸಲ್ಲಿಸುವುದಾಗಿ’ ಹೇಳಿದರು. ಮತ್ತೊಂದು ವಿಶೇಷ ಎಂದರೆ, ಔರಂಗಜೇಬ್ ಅವರ ತಂದೆ ಹನೀಫ್ ಅವರು ಸಹ ಸೇನೆಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.