18 ತಾಸು ನಡೆದ ಬೋನಿ ಕಪೂರ್ ವಿಚಾರಣೆಯಲ್ಲಿ ಅವರು ಹೇಳಿದ್ದೇನು..?

Published : Feb 27, 2018, 07:12 AM ISTUpdated : Apr 11, 2018, 01:12 PM IST
18 ತಾಸು ನಡೆದ ಬೋನಿ ಕಪೂರ್ ವಿಚಾರಣೆಯಲ್ಲಿ ಅವರು ಹೇಳಿದ್ದೇನು..?

ಸಾರಾಂಶ

ಇಲ್ಲಿನ ಪೊಲೀಸರು ಶ್ರೀದೇವಿ ಪತಿ ಬೋನಿ ಕಪೂರ್ ಅವರನ್ನು ಸತತ 16-18 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಟೆಲ್ ಕೋಣೆಯಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಶನಿವಾರ ಸಾವನ್ನಪ್ಪಿದ ನಂತರ ಭಾನುವಾರ ಸಂಜೆ ಬೋನಿ ಕಪೂರ್ ಅವರನ್ನು ಪೊಲೀಸ್ ಹೆಡ್ ಕ್ವಾರ್ಟರ್ಸ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ದುಬೈ: ಇಲ್ಲಿನ ಪೊಲೀಸರು ಶ್ರೀದೇವಿ ಪತಿ ಬೋನಿ ಕಪೂರ್ ಅವರನ್ನು ಸತತ 16-18 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಟೆಲ್ ಕೋಣೆಯಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಶನಿವಾರ ಸಾವನ್ನಪ್ಪಿದ ನಂತರ ಭಾನುವಾರ ಸಂಜೆ ಬೋನಿ ಕಪೂರ್ ಅವರನ್ನು ಪೊಲೀಸ್ ಹೆಡ್ ಕ್ವಾರ್ಟರ್ಸ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ನಂತರ ಸಾವಿನಲ್ಲಿ ಅವರ ಪಾತ್ರವಿಲ್ಲ ಎಂದು ಕ್ಲೀನ್‌ಚಿಟ್ ನೀಡಿದ್ದಾರೆಂದು ರಿಪಬ್ಲಿಕ್ ಟೀವಿ ವರದಿ ಮಾಡಿದೆ. ನಂತರ ತನಿಖೆಯು ಪ್ರಾಸಿಕ್ಯೂಶನ್ ವಿಭಾಗಕ್ಕೆ ಹಸ್ತಾಂತರವಾದ ಕಾರಣ ಬೋನಿ ಅವರು ಅಲ್ಲಿಯೂ ವಿಚಾರಣೆಗೆ ಹಾಜರಾದರು ಎಂದು ತಿಳಿದುಬಂದಿದೆ.

‘ಶ್ರೀದೇವಿ ಅವರ ಸಾವು ಸಹಜವಾಗಿದ್ದು, ನಮಗೆ ಯಾವುದೇ ಅನುಮಾನ ಇಲ್ಲ’ ಎಂದು ಬೋನಿ ಅವರು ಪ್ರಾಸಿಕ್ಯೂಶನ್ ಮುಂದೆ ತಿಳಿಸಿದರು ಎನ್ನಲಾಗಿದೆ.  ಮದುವೆ ಮುಗಿದ ಮೇಲೆ ಬೋನಿ ಕಪೂರ್ ಅವರು ಮಗಳೊಂದಿಗೆ ಮುಂಬೈಗೆ ವಾಪಸಾಗಿದ್ದರು. ಶ್ರೀದೇವಿ ದುಬೈನಲ್ಲೇ ಉಳಿದಿದ್ದರು. ಆದರೆ, ಶನಿವಾರ ಬೋನಿ ಕಪೂರ್ ದಿಢೀರನೆ ಮತ್ತೆ ದುಬೈಗೆ ತೆರಳಿದ್ದರು. ನಂತರ ಶ್ರೀದೇವಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಶ್ರೀದೇವಿಗೆ ಸರ್‌ಪ್ರೈಸ್ ನೀಡಲು ತಾನು ಪೂರ್ವಮಾಹಿತಿ ನೀಡದೆ ದುಬೈಗೆ ತೆರಳಿದ್ದಾಗಿ ಬೋನಿ ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!