
ಮುಂಬೈ (ಫೆ. 28): ಶ್ರೀದೇವಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.
ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಿಂದ ಪಾರ್ಥಿವ ಶರೀರ ಮೆರವಣಿಗೆ ಯಾತ್ರೆ ವಿಲೆಪರ್ಲೆ ಸೇವಾ ಸಮಾಜ ಚಿತಾಗಾರದವರೆಗೆ ಸಾಗಲಿದೆ. ಶ್ರೀದೇವಿಗೆ ಮಲ್ಲಿಗೆ ಹೂಗಳೆಂದರೆ ಭಾರೀ ಇಷ್ಟವಾದ್ದರಿಂದ ತೆರೆದ ವಾಹನಕ್ಕೆ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿಕೊಂಡು ಯಾತ್ರೆ ಹೊರಡಲಿದೆ. ಪಾರ್ಥಿವ ಶರೀರಕ್ಕೂ ಮಲ್ಲಿಗೆ ಹೂಗಳಿಂದ ಅಲಂಕರಿಸಲಾಗಿದೆ.
ಧಾರ್ಮಿಕ ವಿಧಿ ವಿಧಾನಗಳು ಹೇಗೆ?
ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಕುಟುಂಬ ನಿರ್ಧರಿಸಿದೆ. ವಿಧಿವಿಧಾನಗಳನ್ನು ನೆರವೇರಿಸಲು 10ಕ್ಕೂ ಹೆಚ್ಚು ಧಾರ್ಮಿಕ ಪಂಡಿತರನ್ನು ದಕ್ಷಿಣ ಭಾರತದ ಆಗಮ ಶಾಸ್ತ್ರ ಪಂಡಿತರನ್ನು ಕುಟುಂಬ ಕರೆಸಿಕೊಂಡಿದೆ. ಮುಂಬೈನ ವಿಲೆ ಪರ್ಲೆ ಸಮಾಜ ಚಿತಾಗಾರದಲ್ಲಿ ಸಂಸ್ಕಾರ ನಡೆಸಲಾಗುತ್ತದೆ. ವಿಧಿವಿಧಾನಗಳನ್ನು ನೆರವೇರಿಸಲು 10ಕ್ಕೂ ಹೆಚ್ಚು ಧಾರ್ಮಿಕ ಪಂಡಿತರನ್ನು ಕುಟುಂಬ ಕರೆಸಿಕೊಂಡಿದೆ. ಮಧ್ಯಾಹ್ನ 3.30ರ ಬಳಿಕ ಅಂತಿಮ ಸಂಸ್ಕಾರ ನೆರವೇರಲಿದೆ. ಪತಿ ಬೋನಿ ಕಪೂರ್ ವಿಧಿ ವಿಧಾನಗಳನ್ನು ನೆರವೇರಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.