ಸಿಎಂ ಬುಡಕ್ಕೆ ಬಾಂಬ್ ಇಟ್ಟ ನಾಗ !

Published : Apr 22, 2017, 02:37 PM ISTUpdated : Apr 11, 2018, 01:06 PM IST
ಸಿಎಂ ಬುಡಕ್ಕೆ ಬಾಂಬ್ ಇಟ್ಟ ನಾಗ !

ಸಾರಾಂಶ

ಅಜ್ಞಾತ ಸ್ಥಳದಿಂದಲೇ ಬುಸುಗುತ್ತಿರವ ರೌಡಿ ನಾಗ, ನನ್ನ ಮೇಲೆ ರಾಜಕೀಯ ಕಾರಣಕ್ಕೆ ದಾಳಿ ನಡೆದಿದೆ ಎಂದು ಬುಸುಗುತ್ತಿದ್ದಾನೆ, ಸಂಸದ ಪಿ.ಸಿ.ಮೋಹನ್​ಗೆ ನನ್ನ ಮೇಲೆ ಹೊಟ್ಟೆ ಉರಿ ಇದ್ದು ಷಡ್ಯಂತ್ರ ನಡೆಸಿದ್ದಾರೆ. ಪಿ.ಸಿ. ಮೋಹನ್ ಇದೇ ನಿನ್ನ ಫೈನಲ್​ ಚುನಾವಣೆ, ಮುಂದಿನ ದಿನಗಳಲ್ಲಿ ಕೌನ್ಸಿಲರ್​ ಕೂಡ ಆಗಲ್ಲ ಎಂದು ಆರ್ಭಟಿಸಿದ್ದಾನೆ.

ಪೊಲೀಸರಿಂದ ತಲೆಮರೆಸಿಕೊಂಡು ತಿರುಗುತ್ತಿರುವ ರೌಡಿ ನಾಗ ರಾಜಕಾರಣಿಗಳು ತನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆಂದು ಆರೋಪಿಸಿದ್ದಾನೆ. ದಾಳಿ ಹಿಂದಿನ ಸೂತ್ರದಾರಿಗಳು ಶಾಸಕ ಗುಂಡೂರಾವ್​​ ಸಂಸದ ಪಿಸಿ ಮೋಹನ್​ ವಿರುದ್ಧ ನಾಗ ದೂರಿದ್ದಾನೆ. ಅಲ್ಲದೆ, ಸಿಎಂ ಬುಡಕ್ಕೂ ನಾಗ ಬಾಂಬ್ ಇಟ್ಟಿದ್ದಾನೆ.

ಬ್ಲಾಕ್​ ಅಂಡ್​ ವೈಟ್​ ದಂಧೆಯಲ್ಲಿ ಭಾಗಿಯಾಗಿ ರೌಡಿನಾಗ ಪೊಲೀಸರ ದಾಳಿ ಸುಳಿವು ಸಿಗುತ್ತಿದ್ದಂತೆ ಪರಾರಿಯಾದ್ದು, ಇದೀಗ ರಾಜಕಾರಣಿಗಳ ವಿರುದ್ಧ ಬುಸ್​​ಗುಟ್ಟಿದ್ದಾನೆ. ಅಜ್ಞಾತ ಸ್ಥಳದಿಂದಲೇ ವಿಡೀಯೋ ಮಾಡಿ ಸುವರ್ಣ ನ್ಯೂಸ್​​ಗೆ ಕಳುಹಿಸಿದ ನಾಗ ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದಾನೆ.

ಅಜ್ಞಾತ ಸ್ಥಳದಿಂದಲೇ ಬುಸುಗುತ್ತಿರವ ರೌಡಿ ನಾಗ, ನನ್ನ ಮೇಲೆ ರಾಜಕೀಯ ಕಾರಣಕ್ಕೆ ದಾಳಿ ನಡೆದಿದೆ ಎಂದು ಬುಸುಗುತ್ತಿದ್ದಾನೆ, ಸಂಸದ ಪಿ.ಸಿ.ಮೋಹನ್​ಗೆ ನನ್ನ ಮೇಲೆ ಹೊಟ್ಟೆ ಉರಿ ಇದ್ದು ಷಡ್ಯಂತ್ರ ನಡೆಸಿದ್ದಾರೆ. ಪಿ.ಸಿ. ಮೋಹನ್ ಇದೇ ನಿನ್ನ ಫೈನಲ್​ ಚುನಾವಣೆ, ಮುಂದಿನ ದಿನಗಳಲ್ಲಿ ಕೌನ್ಸಿಲರ್​ ಕೂಡ ಆಗಲ್ಲ ಎಂದು ಆರ್ಭಟಿಸಿದ್ದಾನೆ.

ಶಾಸಕ ದಿನೇಶ್​ ಗುಂಡೂರಾವ್​​ ವಿರುದ್ಧವೂ ಗಂಭೀರವಾಗಿ ಆರೋಪಿಸಿದ್ದು, ರಾಜಕೀಯ ಪ್ರತಿಸ್ಪರ್ಧಿ ಆಗಿರುವುದರಿಂದ ಷಡ್ಯಂತ್ರ ಮಾಡಿದ್ದಾರೆ. ಹಲವು ಬಾರಿ ನನ್ನ ವಿರುದ್ಧ ರೌಡಿ ಶೀಟ್​ ಹಾಕಿದ್ದು, ಇದೇ ದಿನೇಶ್​ ಅಂತ ಗುಡುಗಿದ್ದಾನೆ. ನಾಗ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ದಿನೇಶ್​ ಗುಂಡೂರಾವ್​, ನನಗೂ ರೌಡಿ ನಾಗನಿಗೂ ಯಾವುದೇ ಸಂಬಂಧವಿಲ್ಲ. ನಾಗ ಕಾಂಗ್ರೆಸ್​ ಪಕ್ಷಕ್ಕೆ ಸೇರಿಸುವುದಕ್ಕೆ ನಾನೇ ವಿರೋಧಿಸಿದ್ದೆ. ಆಧಾರ ರಹಿತ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ, ಸಿಎಂ ಸಿದ್ದರಾಮಯ್ಯ  ಅವರ ಸ್ಪೆಷಲ್ ಪಿಎ ಮಂಜುನಾಥ್, ಹಲವು ಬಾರಿ ಕರೆ ಮಾಡಿ ಬ್ಲಾಕ್ ಹಣವನ್ನು ವೈಟ್ ಮಾಡಲು ಕೇಳುತ್ತಿದ್ದರು. ಐಪಿಎಸ್​ ಅಧಿಕಾರಿಗಳ ಹಣವನ್ನು ಬದಲಾಯಿಸಿಕೊಡುವಂತೆ ಒತ್ತಾಯ ಮಾಡಿದ್ದರು ಎಂದಿದ್ದಾನೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ  ಮಂಜುನಾಥ್ ಎಂಬ ಪಿಎ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಭವಿಷ್ಯ ಹಾಳು ಮಾಡೋಕೆ ಪೊಲೀಸರ ಮೂಲಕ ದಾಳಿ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದೆಂದು ಷಡ್ಯಂತ್ರ ನಡೆಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ ಸತ್ಯಾಂಶ ಹೊರ ಬರುತ್ತೆ ಅಂತ ಸವಾಲು ಎಸೆದಿದ್ದಾನೆ. ಆದರೆ, ರಾಜಕಾರಿಗಳು ಮಾತ್ರ ಆರೋಪ ಅಲ್ಲಗಳೆದಿದ್ದು, ನಮಗೂ ನಾಗ ಆರೋಪಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಸಮಗ್ರ ತನಿಖೆಯ ನಂತರವಷ್ಟೇ, ಸ್ಪಷ್ಟ ಚಿತ್ರ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!