ಬೆಸ್ಕಾಂ ಅವಲಂಬನೆ ಕಡಿಮೆ ಮಾಡಲು ಸೋಲಾರ್ ಪ್ಯಾನಲ್'ಗೆ ಬಿಎಂಟಿಸಿ ಮೊರೆ

Published : Sep 28, 2017, 09:11 PM ISTUpdated : Apr 11, 2018, 12:57 PM IST
ಬೆಸ್ಕಾಂ ಅವಲಂಬನೆ ಕಡಿಮೆ ಮಾಡಲು ಸೋಲಾರ್ ಪ್ಯಾನಲ್'ಗೆ ಬಿಎಂಟಿಸಿ ಮೊರೆ

ಸಾರಾಂಶ

ಆದಾಯದ ವಿಚಾರದಲ್ಲಿ ಪದೇ ಪದೇ ಹೊಡೆತ ತಿನ್ನುತ್ತಿರುವ ಬಿಎಂಟಿಸಿ ಸಂಸ್ಥೆ ಈಗ ನೂತನ ಯೋಜನೆಗಳತ್ತ ಮುಖ ಮಾಡಿದೆ. ಟೆಕ್ನಾಲಜಿ ಮೂಲಕ  ವಿದ್ಯುತ್ ಶಕ್ತಿಗಾಗಿ ಬೆಸ್ಕಾಂ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಲು ಬಿಎಂಟಿಸಿ ತನ್ನ ಸಂಚಾರ ಮತ್ತು ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳ ಮೇಲೆ ಸೋಲಾರ್ ಪ್ಯಾನಲ್ ನ್ನು ಅಳವಡಿಸಲು ಯೋಜನೆ ರೂಪಿಸಿದೆ.

ಬೆಂಗಳೂರು (ಸೆ. 28): ಆದಾಯದ ವಿಚಾರದಲ್ಲಿ ಪದೇ ಪದೇ ಹೊಡೆತ ತಿನ್ನುತ್ತಿರುವ ಬಿಎಂಟಿಸಿ ಸಂಸ್ಥೆ ಈಗ ನೂತನ ಯೋಜನೆಗಳತ್ತ ಮುಖ ಮಾಡಿದೆ. ಟೆಕ್ನಾಲಜಿ ಮೂಲಕ  ವಿದ್ಯುತ್ ಶಕ್ತಿಗಾಗಿ ಬೆಸ್ಕಾಂ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಲು ಬಿಎಂಟಿಸಿ ತನ್ನ ಸಂಚಾರ ಮತ್ತು ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳ ಮೇಲೆ ಸೋಲಾರ್ ಪ್ಯಾನಲ್ ನ್ನು ಅಳವಡಿಸಲು ಯೋಜನೆ ರೂಪಿಸಿದೆ.

ಯೋಜನೆ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಇಂಥದ್ದೇ ಒಂದು ಪ್ರಸ್ತಾವನೆ ಬಂದಿತ್ತು. ಆದರೆ ಸೋಲಾರ್ ಪ್ಯಾನಲ್ ನಿರ್ವಹಣೆ ಸವಾಲಿನ ಸಂಗತಿಯಾಗಿರುವುದರಿಂದ ಅದನ್ನು ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ. ಸೋಲಾರ್ ಪ್ಯಾನಲ್ ಗಳನ್ನು ಬಳಸಿ ಸಂಜೆ ವೇಳೆ ಬಿಎಂಟಿಸಿ ನಿರ್ವಹಣಾ ಕೇಂದ್ರಗಳಲ್ಲಿ ವಿದ್ಯುತ್ ಶಕ್ತಿ ಪಡೆಯಬಹುದು ಆದರೆ ರಾತ್ರಿ 10 ಗಂಟೆ ನಂತರ ಸೋಲಾರ್ ಪ್ಯಾನಲ್ ಗಳನ್ನೇ ಕದಿಯುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಬಿಎಂಟಿಸಿ ಸಂಚಾರ ಮತ್ತು ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳ ರೂಫ್ ಗಳನ್ನು ಬಾಡಿಗೆ ನೀಡಿದರೆ 6 ವರ್ಷಗಳಲ್ಲಿ ಶೇ.30 -40 ರಷ್ಟು ವಿದ್ಯುತ್ ಬೇಡಿಕೆಯನ್ನು ಸೋಲಾರ್ ಪವರ್ ಮೂಲಕ ಪೂರೈಸಬಹುದು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಸಿಸ್ಟಮ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌