ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಆದ ಬಳಿಕ ನಾನು ಸಿಎಂ ಆಕಾಂಕ್ಷಿ

Published : Nov 02, 2017, 10:04 PM ISTUpdated : Apr 11, 2018, 12:50 PM IST
ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಆದ ಬಳಿಕ ನಾನು ಸಿಎಂ ಆಕಾಂಕ್ಷಿ

ಸಾರಾಂಶ

ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಆದರೆ ಈಗಲ್ಲ. ಇನ್ನೊಂದು ಅವಧಿಗೆ ಸಿದ್ದ ರಾಮಯ್ಯವರು ಮುಖ್ಯಮಂತ್ರಿಯಾಗುತ್ತಾರೆ. ಅದಾದ ಬಳಿಕ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬನಾಗುವೆ’.ಮುಖ್ಯಮಂತ್ರಿಯಾಗುವ ಆಸೆ ಪಡುವುದು ತಪ್ಪಲ್ಲ

ವಿಜಯಪುರ(ನ.02): ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿರುವ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್ ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ’ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಆದರೆ ಈಗಲ್ಲ. ಇನ್ನೊಂದು ಅವಧಿಗೆ ಸಿದ್ದ ರಾಮಯ್ಯವರು ಮುಖ್ಯಮಂತ್ರಿಯಾಗುತ್ತಾರೆ. ಅದಾದ ಬಳಿಕ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬನಾಗುವೆ’.ಮುಖ್ಯಮಂತ್ರಿಯಾಗುವ ಆಸೆ ಪಡುವುದು ತಪ್ಪಲ್ಲ ಎಂದು ಹೇಳಿದರು.

ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ ಆರೋಪ ಮಾಡಿ ಹೋರಾಟ ನಡೆಸುವುದಾಗಿ ಹೇಳಿದ್ದ ಬಿಜೆಪಿ, ಬಿ.ಎಸ್. ಯಡಿಯೂರಪ್ಪನವರ ಅನಾರೋಗ್ಯದ ನೆಪವೊಡ್ಡಿ ಮುಂದೂಡಿದೆ. ಯಡಿಯೂರಪ್ಪನವರು ಬೇಗನೆ ಗುಣಮುಖರಾಗಲಿ. ವಿಜಯಪುರದಲ್ಲಿಯೇ ನೀರಾವರಿ ವಿರುದ್ಧ ಹೋರಾಟ ನಡೆಸುವಂತಾಗಲಿ ಎಂದು ವ್ಯಂಗ್ಯಭರಿತವಾಗಿ ಶುಭ ಹಾರೈಸಿದರು. ಪ್ರತ್ಯೇಕ ನಾಡಧ್ವಜ ತಪ್ಪಲ್ಲ. ನಾಡ ಧ್ವಜ ಇರಲೇಬೇಕು ಎಂದು ನುಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಗುಲಗಳಿಗೆ ಸಬ್ಸಿಡಿ ದರದಲ್ಲಿ ಟಿಟಿಡಿ ಮೈಕ್‌, ವಿಗ್ರಹ
ಎಪ್ಸ್ಟೀನ್‌ ಸೆ* ಫೈಲ್‌ಗಳಲ್ಲಿ ಕ್ಲಿಂಟನ್‌, ಜಾಕ್ಸನ್‌ ಫೋಟೋ