
ಬೆಂಗಳೂರು (ಅ. 02): ಸ್ವಯಂ ರಕ್ತದಾನ ಶಿಬಿರ ಏರ್ಪಡಿಸುವಾಗ ಗರಿಷ್ಠ 500 ಯೂನಿಟ್ ರಕ್ತ ಮಾತ್ರ ಸಂಗ್ರಹಿಸಬೇಕು ಹಾಗೂ ಸಂಗ್ರಹಿಸಿರುವ ರಕ್ತವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯು ಎಲ್ಲಾ ರಕ್ತನಿಧಿ ಕೇಂದ್ರಗಳಿಗೆ ಸುತ್ತೋಲೆ ಹೊರಡಿಸಿದೆ.
ರಕ್ತ ಸಂಪೂರ್ಣ ಸದ್ಬಳಕೆ ಮಾಡುವುದು ಹಾಗೂ ರಕ್ತದಾನ ಮಾಡುವ ರೋಗಿಗೆ ಸೂಕ್ತ ಆರೋಗ್ಯಕರ ವ್ಯವಸ್ಥೆ ಮಾಡುವ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸುವಾಗ ಕಟ್ಟುನಿಟ್ಟಿನ ನೀತಿ ಅನುಸರಿಸುವಂತೆ ಸೂಚಿಸಿದೆ.
ರಕ್ತಿನಿಧಿ ಕೇಂದ್ರಗಳು ಸ್ವಯಂ ರಕ್ತದಾನ ಶಿಬಿರ ಏರ್ಪಡಿಸಿದರೆ 500 ಯೂನಿಟ್ ಮಾತ್ರ ಸಂಗ್ರಹಿಸಬೇಕು. ವಿವಿಧ ರಕ್ತನಿಧಿಗಳು ಸೇರಿ ಸಾಮೂಹಿಕ ಸ್ವಯಂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರೆ ವೈಯಕ್ತಿಕ ರಕ್ತನಿಧಿ ಕೇಂದ್ರಗಳು 100ರಿಂದ 150 ಯೂನಿಟ್ ಮಾತ್ರವೇ ಸಂಗ್ರಹಿಸಬೇಕು. ಇದು ಅವರ ಬೇಡಿಕೆ ಮತ್ತು ಉಪಯೋಗದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಬೇಕು ಎಂದು ಸೂಚನೆ ನೀಡಲಾಗಿದೆ.
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಯ ರಕ್ತ ತಪಾಸಣೆ ಹಾಗೂ ಆಪ್ತ ಸಮಾಲೋಚನೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಶಿಬಿರದ ಸ್ಥಳದಲ್ಲಿ ಬೆಳಕು, ಶುದ್ಧಗಾಳಿ ಮತ್ತು ಸ್ವಚ್ಛತೆಯಿರುವಂತೆ ನೋಡಿಕೊಳ್ಳಬೇಕು. ಸಾಕಷ್ಟುಸಿಬ್ಬಂದಿ ಶಿಬಿರದಲ್ಲಿ ಹಾಜರಿರಬೇಕು. ಈ ವೇಳೆ ತುರ್ತು ಚಿಕಿತ್ಸಾ ಘಟಕ ಅಥವಾ ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ ಕಡ್ಡಾಯವಾಗಿ ಮಾಡಿರಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.