
ವಿಜಯಪುರ(ಜು.31): ಅಂಧನಿಗೆ ಮನೆ ಇಲ್ಲವೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಪ್ರಧಾನಮಂತ್ರಿ ಕಾರ್ಯಾಲಯದ ಕದ ತಟ್ಟಿದ ಪರಿಣಾಮ ಸಂತ್ರಸ್ತನಿಗೆ ಮನೆ ದೊರಕಿದೆ. ವಿಜಯಪುರ ಜಿಲ್ಲೆ ಇಂಚಿಗೇರಿ ಗ್ರಾಮದ ಕಾಶಿನಾಥ ಅಗಸರ ಎಂಬವರೇ ಸೂರು ಪಡೆದಿರುವ ವ್ಯಕ್ತಿ.
ಕಾಶಿನಾಥ ಅಗಸರ ಅವರಿಗೆ ದಶಕದ ಹಿಂದೆ ಅಂಧತ್ವ ಆವರಿಸಿದ್ದು ಇದರಿಂದ ಪತ್ನಿ ಹಾಗೂ ಮಕ್ಕಳು ಅವರನ್ನು ಬಿಟ್ಟು ಹೋಗಿದ್ದಾರೆ. ಆಗಿನಿಂದಲೂ ತನ್ನ ಒಂದು ಎಕರೆ ಹೊಲದಲ್ಲೇ ಸಣ್ಣ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದ ಅವರು ತನಗೆ ಮನೆ ಕಟ್ಟಿಕೊಡಿ ಎಂದು ಗ್ರಾ.ಪಂ.ಗೆ ಮನವಿ ಮಾಡಿಕೊಂಡಿದ್ದರು. ಹಲವಾರು ಬಾರಿ ಪ್ರತಿ‘ಟಿಸಿದ್ದರೂ ಗ್ರಾ.ಪಂ. ಸ್ಪಂದಿಸಿರಲಿಲ್ಲ.
ಈ ಕುರಿತಂತೆ 2016ರಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದು ಆ ವರದಿಗಳನ್ನು ಒಟ್ಟುಗೂಡಿಸಿದ ಗ್ರಾಮದ ರವಿ ದೇವರ, ಗಿರೀಶ ಸಾತಲಗಾಂವ, ರಮೇಶ ಸಾತಲ ಗಾಂವ, ರಾಜು ಏಳಗಿ, ವಿಠ್ಠಲ ರಾಠೋಡ ಹಾಗೂ ಮಂಜು ಪರ್ವತಿ ಎಂಬ ಯುವಕರು ಪ್ರಧಾನಿ ಕಚೇರಿಗೆ ಕಳಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿ ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ, ಜಿಲ್ಲಾಡಳಿತ ತಾ.ಪಂ. ಗೆ, ತಾ.ಪಂ. ಗ್ರಾಮ ಪಂಚಾಯ್ತಿಗೆ ಪತ್ರ ಬರೆದು ಸೂರು ಕಲ್ಪಿಸುವಂತೆ ಸೂಚನೆ ನೀಡಿತ್ತು. ಅದರಂತೆ ಗ್ರಾಮ ಪಂಚಾ ಯತಿಯೂ ಕಳೆದ ಕೆಲ ತಿಂಗಳ ಹಿಂದೆ ಕಾಶಿನಾಥ ಅವರಿಗೆ ಬಸವ ವಸತಿ ಯೋಜನೆಯಡಿ ಸೂರು ಕಲ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.