ಅವರಪ್ಪ​ನಾಣೆ ಮೋದಿ ಪಿಎಂ ಆಗಲ್ಲ: ಸಿದ್ದರಾಮಯ್ಯ

By Web DeskFirst Published Feb 20, 2019, 12:05 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಪಕ್ಷಗಳಲ್ಲಿ ಗೆಲ್ಲುವ ಕಸರತ್ತು ಜೋರಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗ​ಳೂರು :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ​ರ​ಪ್ಪ​ನಾಣೆಗೂ ಮತ್ತೆ ಪ್ರಧಾನಿಯಾಗು​ವು​ದಿಲ್ಲ. ತಿಪ್ಪ​ರ​ಲಾಗ ಹೊಡೆ​ದರೂ ಈ ಬಾರಿ ಬಿಜೆಪಿ ಅಧಿ​ಕಾ​ರಕ್ಕೆ ಬರು​ವು​ದಿಲ್ಲ ಎಂದು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹೇಳಿ​ದ್ದಾ​ರೆ.

ನಗ​ರ​ದಲ್ಲಿ ಮಂಗ​ಳ​ವಾರ ನಡೆದ ಯುವ ಕಾಂಗ್ರೆ​ಸ್‌ನ ಸರ್ವ ಸದ​ಸ್ಯರ ಸಮಾ​ವೇಶ ಉದ್ಘಾ​ಟಿಸಿ ಮಾತ​ನಾ​ಡಿದ ಅವರು, ಬಿಜೆಪಿ ಪ್ರಜಾ​ಪ್ರ​ಭು​ತ್ವ​ವನ್ನೇ ನಾಶ ಮಾಡಲು ಹೊರಟ ಪಕ್ಷ​ವಾ​ಗಿದೆ. ಇದು ದೇಶದ ಜನ​ತೆಗೆ ಅರ್ಥ​ವಾ​ಗಿದೆ. ಹೀಗಾಗಿ ಬಿಜೆ​ಪಿಗೆ ಮತ್ತೆ ಅಧಿ​ಕಾ​ರ​ವನ್ನು ದೇಶದ ಜನತೆ ನೀಡು​ವು​ದಿಲ್ಲ. ತಿಪ್ಪ​ರ​ಲಾಗ ಹಾಕಿ​ದರೂ, ಅವ​ರ​ಪ್ಪ​ನಾ​ಣೆಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗು​ವು​ದಿಲ್ಲ ಎಂದು ಹೇಳಿ​ದ​ರು.

ಈ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಯುವ​ಕರ ಪಾತ್ರ ಬಹಳ ಪ್ರಮು​ಖ​ವಾ​ದದ್ದು. ಬಿಜೆಪಿ ಸದಾ ಯುವ ಮತ​ದಾ​ರ​ರನ್ನು ಹಾದಿ ತಪ್ಪಿಸುವ ಕೆಲಸ ಮಾಡು​ತ್ತದೆ. ಹೀಗಾಗಿ, ಬಿಜೆ​ಪಿ ಹಾಗೂ ನರೇಂದ್ರ ಮೋದಿ ಹೇಗೆ ಈ ದೇಶಕ್ಕೆ ಮಾರ​ಕ​ವಾ​ಗಿ​ದ್ದಾರೆ ಎಂಬು​ದನ್ನು ಯುವ​ಕ​ರಿಗೆ ಮನ​ದಟ್ಟು ಮಾಡಿ​ಕೊ​ಡುವ ಕೆಲ​ಸ​ವನ್ನು ಯುವ ಕಾಂಗ್ರೆಸ್‌ ಮಾಡ​ಬೇಕು. ತನ್ಮೂ​ಲಕ ಯುವ​ಕರ ಮುಗ್ಧತೆಯನ್ನು ಬಳ​ಸಿ​ಕೊಂಡು ಮತ ಲೂಟಿ ಮಾಡುವ ಬಿಜೆ​ಪಿಯ ಷಡ್ಯಂತ್ರ ಈ ಬಾರಿಯ ಚುನಾ​ವ​ಣೆ​ಯಲ್ಲಿ ಯಶ​ಸ್ವಿ​ಯಾ​ಗ​ದಂತೆ ತಡೆ​ಯ​ಬೇಕು ಎಂದರು.

ಅನಂತ​ಕು​ಮಾರ್‌ ಹೆಗಡೆ ಜೈಲಿಗೆ ಹಾಕು​ತ್ತಿ​ದ್ದೆ:  ಬಿಜೆಪಿ ಹಾಗೂ ಆ ಪಕ್ಷದ ನಾಯ​ಕ​ರಿಗೆ ಪ್ರಜಾ​ಪ್ರ​ಭುತ್ವ ಹಾಗೂ ಸಂವಿ​ಧಾ​ನದ ಬಗ್ಗೆ ಗೌರ​ವ​ವಿಲ್ಲ. ಸಂವಿ​ಧಾ​ನ​ವನ್ನೇ ಬದ​ಲಿ​ಸು​ವು​ದಾಗಿ ಕೇಂದ್ರ ಸಚಿವ ಅನಂತ​ಕು​ಮಾರ ಹೆಗಡೆ ಹೇಳಿಕೆ ನೀಡು​ತ್ತಾರೆ. ನಾನೇ​ನಾ​ದರೂ ಪ್ರಧಾ​ನಿ​ಯಾ​ಗಿ​ದ್ದರೆ ಇಂತಹ ಹೇಳಿಕೆ ನೀಡಿದ ಅನಂತ​ಕು​ಮಾರ ಹೆಗ​ಡೆ​ಯನ್ನು ಜೈಲಿಗೆ ತಳ್ಳು​ತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿ​ದ​ರು.

ಲೋಕ​ಸಭೆ ಚುನಾ​ವಣೆಗೆ ಯುವ ಕಾಂಗ್ರೆಸ್‌ ಸರ್ವ ಸಿದ್ಧತೆ ನಡೆ​ಸ​ಬೇಕು. ಸದ​ಸ್ಯತ್ವ ನೋಂದಣಿ ಹೆಚ್ಚಿ​ಸ​ಬೇಕು. ಕಾರ್ಯ​ಕ​ರ್ತರ ಸಂಘ​ಟ​ನೆ​ಯನ್ನು ಉತ್ತಮಪಡಿ​ಸ​ಬೇಕು ಎಂದು ಅವರು ಈ ಸಂದ​ರ್ಭ​ದಲ್ಲಿ ಕರೆ ನೀಡಿ​ದ​ರು. ಸಮಾ​ವೇ​ಶ​ದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಉಪಾ​ಧ್ಯಕ್ಷ ಶ್ರೀನಿ​ವಾಸ್‌, ಯುವ ಕಾಂಗ್ರೆಸ್‌ ರಾಜ್ಯಾ​ಧ್ಯಕ್ಷ ಬಸ​ನ​ಗೌಡ ಬಾದರ್ಲಿ, ಎಐ​ಸಿಸಿ ಕಾರ್ಯ​ದರ್ಶಿ ಕೇಶವ್‌ ಚಂದ್‌, ನಾಯ​ಕ​ರಾದ ಸಂದೀಪ್‌ ವಾಲ್ಮೀಕಿ, ಕೃಷ್ಣ ಆಳ್ವಾರ್‌ ಮೊದ​ಲಾ​ದ​ವರು ಪಾಲ್ಗೊಂಡಿ​ದ್ದರು.

click me!