
ಹುಬ್ಬಳ್ಳಿ (ನ.08): ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಭಾಷಣ ಮಾಡೋದನ್ನು ಬಿಡಲಿ.ಮಹಾದಾಯಿ ಸಂಪೂಣ೯ ಹೊಣೆ ಬಿಜೆಪಿಗೆ ಸೇರಿದ್ದು. ವಿವಾದ ಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರವೇ ಹೊರಬೇಕು ಎಂದು ವಿವಾದ
ಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರ ಹೊರಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ದಲ್ಲಿ ಸಭೆ ರದ್ದಾಗಿದ್ದು ಬಿಜೆಪಿಯವರಿಂದ. ಮಹಾದಾಯಿ ಯೋಜನೆ ಜಾರಿಯಾದರೆ ಅದರ ಕ್ರೆಡಿಟ್ ಬಿಜೆಪಿಗೆ ಹೋಗುತ್ತೆ. ಆಗದಿದ್ದರೆ ವೈಫಲ್ಯದ ಹೊಣೆಯನ್ನೂ ಅವರೇ ಹೊರಬೇಕು ಎಂದು ಹೊರಟ್ಟಿ ಹೇಳಿದರು.
ಇದರ ಜೊತೆಗೆ ಇತ್ತೀಚಿಗೆ ಸಾಕಷ್ಟು ಚರ್ಚೆಯಾಗುತ್ತಿರುವ ಟಿಪ್ಪು ಜಯಂತಿ ಬಗ್ಗೆ ಮಾತನಾಡುತ್ತಾ, ಟಿಪ್ಪು ಜಯಂತಿಯನ್ನ ಆಚರಣೆಗೆ ತಂದವರು ಬಿಜೆಪಿ. ಈ ವಿಚಾರದಲ್ಲಿ ನಿಲ೯ಕ್ಷ್ಯ ಒಳ್ಳೆಯದು. ಪರ-ವಿರೋಧ ಮಾಡುವುದರಿಂದ ವಿವಾದ
ದೊಡ್ಡದಾಗಿದೆ.ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ಗಮನ ಹರಿಸಿ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.