ಸರ್ಕಾರ ಪತನ: ಮಾಧ್ಯಮಗಳಿಗೆ ಸೆಲ್ಯೂಟ್ ಹೊಡೆದ ಎಸ್‌.ಎಂ ಕೃಷ್ಣ!

By Web DeskFirst Published Jul 25, 2019, 4:17 PM IST
Highlights

ರಾಜ್ಯ ರಾಜಕಾರಣ ಬದಲಾವಣೆಯ ಹಾದಿಯಲ್ಲಿ ಇರುವಾಗ ಮಾಜಿ ಸಿಎಂ, ಒಂದು ಕಾಲದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾಗಿ ಇದೀಗ ಬಿಜೆಪಿಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ  ಎಸ್‌. ಎಂ. ಕೃಷ್ಣ ಅವರ ಹೆಜ್ಜೆ ಸಹ ಅಷ್ಟೆ ಪ್ರಮುಖವಾಗಿದೆ.

ಮೈಸೂರು[ಜು. 25]  ಮೈಸೂರಿಗೆ  ಆಗಮಿಸಿದ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಮಾಧ್ಯಮದವರಿಗೆ ಸೆಲ್ಯೂಟ್ ಹೊಡೆದು ಮುಂದಕ್ಕೆಹೋಗಿದ್ದಾರೆ.

"

ಮೈಸೂರಿನ ವಿಮಾನ‌ ನಿಲ್ದಾಣದಿಂದ ನೇರವಾಗಿ ಬೆಟ್ಟಕ್ಕೆ ಕೃಷ್ಣ ತೆರಳಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಎಸ್‌ಎಂಕೆ  ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮದವರು ಮಾತನಾಡಿಸಲು ಕರೆದರೆ ಸೆಲ್ಯೂಟ್ ಮಾಡಿ ಮಾತನಾಡದೆ ಕೃಷ್ಣ ತೆರಳಿದ್ದಾರೆ.

ಕರ್ನಾಟಕ ರಾಜಕೀಯ ಹೈಡ್ರಾಮಾ: ಆರಂಭದಿಂದ ಅಂತ್ಯದವರೆಗೆ

ರಾಜ್ಯದಲ್ಲಿನ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಇದರ ನಡುವೆ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು  ಹೈಕಮಾಂಡ್ ಭೇಟಿಗೆ ಕಾದು ಕುಳಿತಿದ್ದಾರೆ.

 

click me!