ಹಿಂದೂ-ಮುಸ್ಲಿಂ ಹೊಡೆದಾಡಿ ಸಾಯಬೇಕೆನ್ನುವುದು ಸಿಎಂ ಉದ್ದೇಶ : ಅಶೋಕ್

Published : Jan 08, 2018, 01:23 PM ISTUpdated : Apr 11, 2018, 01:10 PM IST
ಹಿಂದೂ-ಮುಸ್ಲಿಂ ಹೊಡೆದಾಡಿ ಸಾಯಬೇಕೆನ್ನುವುದು ಸಿಎಂ ಉದ್ದೇಶ : ಅಶೋಕ್

ಸಾರಾಂಶ

ಆನಂದ್ ರಾವ್ ಸರ್ಕಲ್’ನಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ವಿವಿಧ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.08): ಆನಂದ್ ರಾವ್ ಸರ್ಕಲ್’ನಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ವಿವಿಧ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿಂದುಗಳು ಸತ್ತಾಗ ಮಾತ್ರ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಆರೋಪ ಮಾಡುತ್ತೀರಾ..? ಈಗ ರಾಜ್ಯದಲ್ಲಿ ಮುಸ್ಲಿಮರು ಕೂಡ ಯಾಕೆ ಸಾಯುತ್ತಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ  ನಿದ್ರೆ ಮಾಡುತ್ತಿದ್ದರು.

ಈಗ ಮೊನ್ನೆ ನಡೆದ ಎರಡು ಕೊಲೆ ಬಳಿಕ ಸ್ವಲ್ಪ ಎದ್ದಿದ್ದಾರೆ. ಈಗ ಮೃತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಕೊಲೆಗಳು ನಡೆಯುತ್ತಿರಲಿಲ್ಲ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.  

ಇಷ್ಟೇ ಅಲ್ಲದೇ ಲಿಂಗಾಯತ ವೀರಶೈವ ಎಂದು ಬೇರ್ಪಡಿಸಲು ಹೋದ ಪ್ರಯತ್ನವೂ ಕೂಡ ಟುಸ್ ಆಗಿದೆ. ಧರ್ಮ ಒಡೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹಿಂದೂ ಮುಸ್ಲಿಂ ಹೊಡೆದಾಡಿ ಸಾಯಬೇಕು ಎನ್ನುವುದೇ ಸಿಎಂ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಿ ಎಫ್ ಐ, ಎಸ್ ಡಿ ಪಿಐ ನಾಯಕರನ್ನ ಕರೆದು ಸಿದ್ದರಾಮಯ್ಯ ಮಾತನಾಡುತ್ತಾರೆ. ಅದನ್ನು ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ದೇಶ ದ್ರೋಹಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳೊ ಅನಿವಾರ್ಯತೆ ಬಿಜೆಪಿಗೆ ಇಲ್ಲ. ಸಿದ್ದರಾಮಯ್ಯ ನವರೇ ನೀವು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಇಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

 ಅಲ್ಲದೇ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರು ಕಾಂಗ್ರೆಸ್ ಏಜೆಂಟ್ ‌ಆಗಿದ್ದಾರೆ. ಸಾಕ್ಷಿದಾರರನ್ನು, ಎಲ್ಲರನ್ನೂ ಹೆದರಿಸುವ ಕೆಲಸ ಅವರು ಮಾಡುತ್ತಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಸುರೇಶ್,  ದೀಪಕ್ ರಾವ್ ಹತ್ಯೆಯಾದಾಗ ಸುದ್ದಿಗೋಷ್ಟಿ ನೀಡಲಿಲ್ಲ.  ಮಾಹಿತಿ ನೀಡಲಿಲ್ಲ. ಬಷೀರ್ ಮೃತಪಟ್ಟಾಗ ಸುದ್ದಿಗೋಷ್ಟಿ ಕರೆದು ಆರೋಪಿಗಳ ಹೆಸರು ಬಹಿರಂಗ ಮಾಡಿದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
ಬಾಯಿಂದ ಕುಡಿಯೋದು ಹಳೇ ಸ್ಟೈಲ್; ಮೂಗಿನಲ್ಲೇ ಬಿಯರ್‌ ಇಳಿಸಿದ ಮಹಾಭೂಪ! Video Viral