ವೀರಪ್ಪ ಮೊಯ್ಲಿಗೆ ನೋಟಿಸ್!

Published : Nov 23, 2018, 09:46 AM IST
ವೀರಪ್ಪ ಮೊಯ್ಲಿಗೆ ನೋಟಿಸ್!

ಸಾರಾಂಶ

ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಸಂಸದರೂ ಆದ ಹಣಕಾಸು ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯ ಎಂ.ವೀರಪ್ಪ ಮೊಯ್ಲಿ ಅವರಿಗೆ ಬಿಜೆಪಿ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್‌ ಜಾರಿ ಮಾಡಿದ್ದಾರೆ.

ನವದೆಹಲಿ[ನ.23]: ‘ನೋಟು ರದ್ದತಿಯಿಂದ ರೈತರಿಗೆ ಹೊಡೆತವಾಗಿದೆ’ ಎಂದು ಕೃಷಿ ಸಚಿವಾಲಯ ತಮಗೆ ವರದಿ ಸಲ್ಲಿಸಿದೆ ಎಂದು ಹೇಳಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಸಂಸದರೂ ಆದ ಹಣಕಾಸು ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯ ಎಂ.ವೀರಪ್ಪ ಮೊಯ್ಲಿ ಅವರಿಗೆ ಬಿಜೆಪಿ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್‌ ಜಾರಿ ಮಾಡಿದ್ದಾರೆ.

ಇದೇ ಸಮಿತಿಯ ಸದಸ್ಯರೂ ಆದ ಸಂಸದ ನಿಶಿಕಾಂತ ದುಬೆ ಅವರು ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರಿಗೆ ನೋಟಿಸ್‌ ರವಾನಿಸಿದ್ದು, ಮೊಯ್ಲಿ ವಿರುದ್ಧ ಹಕ್ಕುಚ್ಯುತಿ ಕೋರಿಕೆ ಸಲ್ಲಿಸಿದ್ದಾರೆ. ‘ಗೌಪ್ಯವಾಗಿ ಇಡಬೇಕಾದ ಕೃಷಿ ಸಚಿವಾಲಯದ ವರದಿಯನ್ನು ಟ್ವೀಟರ್‌ ಮೂಲಕ ಮೊಯ್ಲಿ ಬಹಿರಂಗಪಡಿಸಿದ್ದು ಹಕ್ಕುಚ್ಯುತಿಯಾಗಿದೆ’ ಎಂದು ದುಬೆ ಆರೋಪಿಸಿದ್ದಾರೆ.

‘ನೋಟು ರದ್ದತಿಯಿಂದಾಗಿ ರೈತರಿಗೆ ಭಾರಿ ಸಮಸ್ಯೆಯಾಗಿತ್ತು ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯವೇ ಒಪ್ಪಿಕೊಂಡಿದೆ’ ಎಂದು ಬುಧವಾರ ಮೊಯ್ಲಿ ಟ್ವೀಟ್‌ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?