ಪ್ಲಾಸ್ಟಿಕ್ ಬಾಟಲನ್ನು ನದಿಗೆಸೆದ ಬಿಜೆಪಿ ಸಂಸದೆ!

Published : Jun 03, 2017, 04:20 PM ISTUpdated : Apr 11, 2018, 12:48 PM IST
ಪ್ಲಾಸ್ಟಿಕ್ ಬಾಟಲನ್ನು ನದಿಗೆಸೆದ ಬಿಜೆಪಿ ಸಂಸದೆ!

ಸಾರಾಂಶ

ನೆರೆಯನ್ನು ತಡೆಯುವ ನಿಟ್ಟಿನಲ್ಲಿ ಸರಾಯೂ ನದಿಗೆ ಕಟ್ಟಲಾದ ತಡೆಗೋಡೆಯನ್ನು ಪರಿಶೀಲಿಸಲು ತೆರಳಿದ್ದ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲನ್ನು ನೀರಿಗೆಸೆದಿದ್ದು ಭಾರೀ ಟೀಕೆಗೊಳಗಾಗಿದೆ.

ಗೋಂಡಾ, ಉತ್ತರ ಪ್ರದೇಶ: ಪ್ರಧಾನಿ ಮೋದಿಯ ಸ್ವಚ್ಛ ಭಾರತದ ಕರೆಯನ್ನು ಪಕ್ಷದ ಸಂಸದೆಯೇ ಗಾಳಿಗೆ ತೂರಿದ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ.

ನೆರೆಯನ್ನು ತಡೆಯುವ ನಿಟ್ಟಿನಲ್ಲಿ ಸರಾಯೂ ನದಿಗೆ ಕಟ್ಟಲಾದ ತಡೆಗೋಡೆಯನ್ನು ಪರಿಶೀಲಿಸಲು ತೆರಳಿದ್ದ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲನ್ನು ನೀರಿಗೆಸೆದಿದ್ದು ಭಾರೀ ಟೀಕೆಗೊಳಗಾಗಿದೆ.

ತಡೆಗೋಡೆ ಪರಿಶೀಲನೆಗಾಗಿ ಪ್ರಿಯಾಂಕ ಅಧಿಕಾರಿಗಳ ತಂಡದೊಂದಿಗೆ ಕೈಯಲ್ಲಿ ಪ್ಲಾಸಿಟ್ಇಕ್ ಬಾಟಲಿಯನ್ನು ಹಿಡಿದುಕೊಂಡು ದೋಣಿಯನ್ನು ಹತ್ತಿದ್ದಾರೆ. ಬಳಿಕ ಅದನ್ನೇನು ಮಾಡಬೇಕೆಂದು ತೋಚದೆ, ನದಿಗೆಸೆದು ಬಿಟ್ಟಿದ್ದಾರೆ.

ಸ್ವಚ್ಛ ಭಾರತ ಹಾಗೂ ಗಂಗಾ ಶುದ್ಧಿಕರಣದ ಬಗ್ಗೆ ಒತ್ತು ನೀಡುವ ಬಿಜೆಪಿಗೆ, ಸಂಸದೆಯ ಈ ವರ್ತನೆ ಮುಜುಗರ ಉಂಟುಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್
Hate Speech Bill: ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು