ಇತ್ತ ಸರ್ಕಾರಕ್ಕೆ ಸಂಕಷ್ಟ : ಅತ್ತ ಸೂಪರ್ ಸಿಎಂ ರೇವಣ್ಣಗೆ ಕಷ್ಟ ಕಷ್ಟ

Published : Jul 11, 2019, 01:11 PM IST
ಇತ್ತ ಸರ್ಕಾರಕ್ಕೆ ಸಂಕಷ್ಟ : ಅತ್ತ ಸೂಪರ್ ಸಿಎಂ ರೇವಣ್ಣಗೆ ಕಷ್ಟ ಕಷ್ಟ

ಸಾರಾಂಶ

ಕರ್ನಾಟಕ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಇತ್ತ ಎಚ್.ಡಿ ರೇವಣ್ಣ ದೂರೊಂದು ಹೋಗಿದೆ. ಸೂಪರ್ ಸಿಎಂ ಎಂದೇ ಕರೆಸಿಕೊಳ್ಳುವ ರೇವಣ್ಣ ಮೇಲೆ ಬಿಜೆಪಿಗರು ಗರಂ ಆಗಿದ್ದಾರೆ. 

ಬೆಂಗಳೂರು [ಜು.011] : ರಾಜ್ಯ ರಾಜಕೀಯದಲ್ಲಿ ಡ್ರಾಮಾ ನಡೆಯುತ್ತಿದ್ದು, ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಇಷ್ಟಾದರೂ ತಲೆಕೆಸಿಕೊಳ್ಳದೆ ತಮ್ಮ ಇಲಾಖೆಯಲ್ಲಿ ಪ್ರಮೋಷನ್ ದಂದೆಯಲ್ಲಿ ತೊಡಗಿದ್ದ ಸಚಿವ ಎಚ್.ಡಿ. ರೇವಣ್ಣಗೆ  ಇದೀಗ ಸಂಕಷ್ಟ ಎದುರಾಗಿದೆ.   

ಲೋಕೋಪಯೋಗಿ ಇಲಾಖೆಯ 800 ಇಂಜಿನಿಯರ್ ಗಳನ್ನು ಪ್ರಮೋಷನ್ ಮಾಡಲು ಮುಂದಾದ ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. 

ರಾಜ್ಯ ಸರ್ಕಾರ ಪತನದ ಹೊಸ್ತಿಲಲ್ಲಿ ಇದ್ದರೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲಿಂಗರಾಜು ದೂರು ನೀಡಿದ್ದಾರೆ. 

ಸರ್ಕಾರ ಬೀಳುತ್ತಿದ್ದರೂ ರೇವಣ್ಣರಿಂದ 700 ಮಂದಿಗೆ ಪ್ರಮೋಷನ್

ತಮ್ಮ ಇಲಾಖೆಯಲ್ಲಿ ಪ್ರಮೋಷನ್ ನೀಡಲು ಮುಂದಾಗಿರುವ ರೇವಣ್ಣ ಅವರಿಗೆ ಬ್ರೇಕ್ ಹಾಕುವಂತೆ ದೂರಿನಲ್ಲಿ ರೈತ ಮೋರ್ಚಾ ಮುಖಂಡರು ಮನವಿ ಮಾಡಿದ್ದಾರೆ.

ಪ್ರಮೋಷನ್ ನೀಡಲು ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ ಎಂದೂ ಲೋಕೋಪಯೋಗಿ ಸಚಿವ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿದ್ದು, ಇದೀಗ ಪ್ರಮೋಷನ್ ವಿಚಾರವನ್ನು ಗವರ್ನರ್ ಅಂಗಳಕ್ಕೆ ತರಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!