ಡಿಕೆಶಿ ಬಿಜೆಪಿ ಸೇರಲು ನಿರಾಕಸಿದ್ದಕ್ಕೆ ಐಟಿ ದಾಳಿ ನಡೆಯಿತೆ?

Published : Aug 07, 2017, 08:35 PM ISTUpdated : Apr 11, 2018, 12:51 PM IST
ಡಿಕೆಶಿ ಬಿಜೆಪಿ ಸೇರಲು ನಿರಾಕಸಿದ್ದಕ್ಕೆ ಐಟಿ ದಾಳಿ ನಡೆಯಿತೆ?

ಸಾರಾಂಶ

ದೇವೇಗೌಡರಿಗೆ, ಬಿಎಸ್ ವೈ ಗೆ ಥ್ಯಾಂಕ್ಯೂ ಹೇಳಿದ್ದಾರೆ. ಹಾಗಾಗಿ ಬಿಜೆಪಿಯಿಂದಲೂ ನಾವು ಅವರಿಗೆ ಥ್ಯಾಂಕ್ಯೂ ಹೇಳ್ತಿದ್ದೀವಿ'

ಬೆಂಗಳೂರು(ಆ.07): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ಸೇರಲು ಕೇಂದ್ರ ಸಚಿವರೊಬ್ಬರು ಆಹ್ವಾನಿಸಿದ್ದು ಅದನ್ನು ನಿರಾಕರಿಸಿದ್ದಕ್ಕೆ ಅವರ ಮೇಲೆ ಐಟಿ ದಾಳಿ ನಡೆಯಿತೆ ? ಈ ಬಗ್ಗೆ ಸುದ್ದಿಗಾರರು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ' ಮುಂಗಾರು ನಿಧಾನ ಆಗುವುದಕ್ಕೂ ಬಿಜೆಪಿ ಕಾರಣ ಎಂದು ಕಾಂಗ್ರೆಸ್'ನವರು ಆರೋಪಿಸಲಿಲ್ಲವಲ್ಲ' ಎಂದು ಉತ್ತರ ಕೊಟ್ಟರು

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಡಿಕೆಶಿ ಐಟಿ ದಾಳಿ ಬಗ್ಗೆ ಬಿಜೆಪಿ ಸಾಫ್ಟು ಇಲ್ಲ, ಹಾರ್ಡು ಇಲ್ಲ. ಸೂಕ್ಷ್ಮವಾಗಿ ನಮ್ಮ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ದೇವೇಗೌಡರಿಗೆ, ಬಿಎಸ್ ವೈ ಗೆ ಥ್ಯಾಂಕ್ಯೂ ಹೇಳಿದ್ದಾರೆ. ಹಾಗಾಗಿ ಬಿಜೆಪಿಯಿಂದಲೂ ನಾವು ಅವರಿಗೆ ಥ್ಯಾಂಕ್ಯೂ ಹೇಳ್ತಿದ್ದೀವಿ' ಎಂದು ತಿಳಿಸಿದರು.

ಡಿಕೆಶಿ ವಿಷಯವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ,ಆರೋಪ ಮುಕ್ತರಾಗುವರೆಗೂ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ಕೂಡಲೇ ರಾಜೀನಾಮೆ ನೀಡಬೇಕು.ಪ್ರತ್ಯೇಕ ಲಿಂಗಾಯತ ಮಹಾಸಭಾ ವಿಚಾರ.ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಸಮುದಾಯದ ಎಲ್ಲರೂ ಒಂದೆಡೆ ಕುಳಿತು ಅಂತಿಮ‌ ತೀರ್ಮಾನ ತೆಗೆದುಕೊಳ್ಳಬೇಕು.ಯಾರೂ ಕೂಡ ಸಮುದಾಯಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು.ಎಲ್ಲಾ ಮಠಾಧೀಶರ ಜೊತೆ ಈ ಬಗ್ಗೆ ಮೊದಲು ಮುಕ್ತ ಚರ್ಚೆ ನಡೆಯಬೇಕು.ಈ ನಿಟ್ಟಿನಲ್ಲಿ ನಾನೂ ಹಾಗೂ ಸೋಮಣ್ಣ ಮಠಾಧೀಶರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಇಷ್ಟು ದಿನ ಇಲ್ಲದ ವಿವಾದ ಚುನಾವಣೆ ಸಮಯದಲ್ಲಿ ಯಾಕೆ? ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ' ಎಂದು ಆಡಳಿತ ಪಕ್ಷದ ಬಗ್ಗೆ ಕಿಡಿ ಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!
ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!