
ಕೋಲ್ಕತಾ : ಬಿಜೆಪಿಯಲ್ಲಿದ್ದುಕೊಂಡೇ ಸದಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಸಂಸದ ಶತ್ರುಘ್ನ ಸಿನ್ಹಾ ತೃಣಮೂಲಕ ಕಾಂಗ್ರೆಸ್ ಏರ್ಪಡಿಸುವ ವಿಪಕ್ಷಗಳ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಅಯೊಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಮಾಧ್ಯಮಗಳು ಸಿನ್ಹಾ ಪ್ರಶ್ನೆ ಮಾಡಿದ್ದು, ಯಾವುದೇ ಉತ್ತರ ನೀಡದೇ ಮೌನವಾಗಿ ಮುನ್ನಡೆದಿದ್ದಾರೆ.
ಒಂದು ವೇಳೆ ದೇಶಕ್ಕೆ ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿಯಾಗ್ತಾರಾ ಎನ್ನುವ ಪ್ರಶ್ನೆಗೂ ಅವರು ಜಾಣತನದಿಂದಲೇ ಉತ್ತರಿಸಿದ್ದಾರೆ.
ಅವರೊಬ್ಬ ರಾಷ್ಟ್ರೀಯ ನಾಯಕಿ, ಹೆಚ್ಚು ಅನುಭವವನ್ನು ಹೊಂದಿದ ನಾಯಕಿ, ಇದಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶವಿದೆ ಎಂದು ಹೇಳಿದ್ದಾರೆ.
ಕೆಲಸ ಮಾಡುವುದು ಹಾಗೂ ಭರವಸೆ ನೀಡೋದಕ್ಕೆ ತುಂಬಾ ವ್ಯತ್ಯಾಸ ಇದೆ. ಮುಂದಿನ ಪ್ರಧಾನಿ ಯಾರಾಗಬೇಕು ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ಇದು ನಮ್ಮ ಕೆಲಸವಲ್ಲ ಎಂದಿದ್ದಾರೆ.
ಅಲ್ಲದೇ ಮುಂದಿನ ಚುನಾವಣೆ ಅತ್ಯಂತ ಇಂಟರೆಸ್ಟಿಂಗ್ ಆಗಿರಲಿದೆ ಎನ್ನುವುದು ಶತ್ರುಘ್ನ ಸಿನ್ಹಾ ಅವರ ನಂಬಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ