
ಬೆಂಗಳೂರು(ಸೆ.15): ಬಿಜೆಪಿ ನಾಯಕ ಶಂಕರ್ ಬಿದರಿ ವರ್ತನೆಗೆ ಬಿಜೆಪಿ ನಾಯಕರು ಇದೀಗ ಗರಂ ಆಗಿದ್ದಾರೆ. ಕಾಂಗ್ರೆಸ್ ನಾಯಕ ಎಂ. ಬಿ ಪಾಟೀಲ್ ಜೊತೆ ಈ ನಾಯಕ ಕಾಣಿಸಿಕೊಂಡಿದ್ದೇ ಬಿಜೆಪಿಗರ ಕ್ರೊಶಕ್ಕೆ ಕಾರಣವಾಗಿದ್ದು. ಅಷ್ಟಕ್ಕೂ ಶಂಕರ್ ಬಿದರಿ ಕಾಂಗ್ರೆಸ್ ನಾಯನೊಂದಿಗೆ ಕಾಣಿಸಿಕೊಂಡಿದ್ದೇಕೆ? ಇಲ್ಲಿದೆ ವಿವರ
ಈಗಾಗಲೇ ಸಿದ್ಧಗಂಗಾ ಮಠ ಹಾಗೂ ಕಾಂಗ್ರೆಸ್ ನಾಯಕ . ಎಂ. ಬಿ. ಪಾಟೀಲ್ ವಿಚಾರ ಭಾರೀ ಸದ್ದು ಮಾಡಿತ್ತು. ಇದೇ ವಿಚಾರವಾಗಿ ಎಂ.ಬಿ.ಪಾಟೀಲ್ ನಿನ್ನೆಯಷ್ಟೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಆದರೆ ಇದೀಗ ಭೇಟಿಯ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ನಾಯಕ ಶಂಕರ್ ಬಿದರಿಯೂ ಅವರೊಂದಿಗಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಂಕರ್ ಬಿದರಿ ಮೇಲೆ ಗರಂ ಆಗಿರುವ ಬಿಜೆಪಿ ನಾಯಕರು 'ಮಧ್ಯಸ್ಥಿಕೆಗೆ ಶಂಕರ್ ಬಿದರಿ ಯಾಕೆ ಹೋಗಬೇಕಿತ್ತು?, ಕಾಂಗ್ರೆಸ್ ನಾಯಕರಿಗೆ ಇಲ್ಲದ ಆಸಕ್ತಿ ಶಂಕರ್ ಬಿದರಿಗೆ ಯಾಕೆ?' ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.