ಕಮ್ಮಿ ರೇಟಿಗೆ ಗೋಮಾಂಸ ಕೊಡ್ತೇವೆ: ಬಿಜೆಪಿ ಮುಖಂಡನ ಆಶ್ವಾಸನೆ

Published : May 30, 2017, 11:32 AM ISTUpdated : Apr 11, 2018, 01:13 PM IST
ಕಮ್ಮಿ ರೇಟಿಗೆ ಗೋಮಾಂಸ ಕೊಡ್ತೇವೆ: ಬಿಜೆಪಿ ಮುಖಂಡನ ಆಶ್ವಾಸನೆ

ಸಾರಾಂಶ

'ಬಿಜೆಪಿ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಗೋಮಾಂಸ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕುತ್ತೇವೆ. ಇದರಿಂದ ಗೋಮಾಂಸ ದರ ಇಳಿಯಲಿದೆ'

ಶಿಲ್ಲಾಂಗ್‌: ‘ಗೋಮಾಂಸವು ಮೇಘಾಲಯದ ಗಾರೋ ಬುಡಕಟ್ಟು ಜನರ ನಿತ್ಯದ ಆಹಾರ. ಆದರೆ ಗೋವಧೆಯ ಮೇಲೆ ನಿರ್ಬಂಧಗಳು ಇರುವ ಕಾರಣ ಬೆಲೆ ಜಾಸ್ತಿ ಇದೆ. ಬಿಜೆಪಿ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಗೋಮಾಂಸ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕುತ್ತೇವೆ. ಇದರಿಂದ ಗೋಮಾಂಸ ದರ ಇಳಿಯಲಿದೆ' ಎಂದು ಮೇಘಾಲಯ ಬಿಜೆಪಿ ಮುಖಂಡ ಬರ್ನಾರ್ಡ್‌ ಮರಕ್‌ ಹೇಳಿದ್ದಾರೆ.

ಮರಕ್‌ ಅವರ ಹೇಳಿಕೆ ಬಿಜೆಪಿಗೆ ಮುಜುಗರ ತಂದಿದೆ. ಮೇಘಾಲಯದಲ್ಲಿ ಕ್ರೈಸ್ತ ಸಮುದಾಯದವರೇ ಹೆಚ್ಚಿದ್ದು, ಅಲ್ಲಿ ಗೋಮಾಂಸವೇ ಪ್ರಮುಖ ಖಾದ್ಯವಾಗಿದೆ. ಬಿಜೆಪಿ ಆಡಳಿತದ ಗೋವಾದಲ್ಲೂ ಕ್ರೈಸ್ತರೇ ಹೆಚ್ಚಿದ್ದು, ಅಲ್ಲೂ ಕೂಡ ಗೋಮಾಂಸ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಟಲ್‌ಜೀ ಹಾಕಿದ ಬುನಾದಿಯ ಮೇಲೆ ನಿಂತ ವಿಕಸಿತ ಭಾರತ: ಬಿ.ವೈ.ವಿಜಯೇಂದ್ರ
ಚಿತ್ರದುರ್ಗ ಬಸ್‌ ದುರಂತ, ಕಣ್ಣು ಬಿಟ್ಟಾಗ ಸುತ್ತಲೂ ಬೆಂಕಿಯ ಜ್ವಾಲೆ! ಗಾಯಾಳು ಕಿರಣ್ ಬಿಚ್ಚಿಟ್ಟ ಭಯಾನಕ ಅನುಭವ