ತಾರಾ ಪ್ರಚಾರಕರ ಪಟ್ಟಿಯಿಂದ ಅಡ್ವಾಣಿ, ಜೋಷಿಗೆ ಕೊಕ್

Published : Jan 21, 2017, 04:38 PM ISTUpdated : Apr 11, 2018, 12:59 PM IST
ತಾರಾ ಪ್ರಚಾರಕರ ಪಟ್ಟಿಯಿಂದ ಅಡ್ವಾಣಿ, ಜೋಷಿಗೆ ಕೊಕ್

ಸಾರಾಂಶ

ಕೇಂದ್ರ ಸಚಿವರು ಹಾಗೂ ಇತರ ನಾಯಕರ ಹೆಸರಿರುವ ಪಟ್ಟಿಯಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.

ನವದೆಹಲಿ (ಜ.21): ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗಳಿಗೆ ಬಿಜೆಪಿಯು 'ತಾರಾ ಪ್ರಚಾರಕ'ರ ಪಟ್ಟಿಯನ್ನು ಬಿಡುಗಡೆಮಾಡಿದ್ದು ಘಟಾನುಘಟಿಗಳ ಹೆಸರನ್ನು ಕೈಬಿಟ್ಟಿದೆಯೆಂದು ವರದಿಯಾಗಿದೆ.

ಕೇಂದ್ರ ಸಚಿವರು ಹಾಗೂ ಇತರ ನಾಯಕರ ಹೆಸರಿರುವ ಪಟ್ಟಿಯಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.

ಯುವಮುಖಂಡ ಹಾಗೂ ಸುಲ್ತಾನಪುರ ಸಂಸದ ವರುಣ್ ಗಾಂಧಿ ಹಾಗೂ ರಾಮಜನ್ಮಭೂಮಿ ಚಳುವಳಿಯ ರೂವಾರಿ ವಿನಯ್ ಕಟಿಯಾರ್ ಅವರ ಹೆಸರನ್ನೂ ಪಟ್ಟಯಿಂದ ಕೈಬಿಡಲಾಗಿದೆ.

ಆದರೆ ವರುಣ್ ಗಾಂಧಿ ತಾಯಿ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ, ಮತ್ತು ವಿವಾದಾತ್ಮಕ ಮುಖಂಡ ಯೋಗಿ ಆದಿತ್ಯನಾಥ್ ಹೆಸರು ಪಟ್ಟಿಯಲ್ಲಿದೆ.

ಉತ್ತರ ಪ್ರದೇಶ ಚುನಾವಣೆ ವಿಚಾರದಲ್ಲಿ ವರುಣ್ ಗಾಂಧಿ ಪಕ್ಷದ ನಾಯಕರೊಂದಿಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ