ಕಲಾಪ ವ್ಯರ್ಥವಾದ ಹಿನ್ನೆಲೆಯಲ್ಲಿ ವೇತನ ಹಿಂದಿರುಗಿಸುವೆ ಎಂದ ಬಿಜೆಡಿ ಸಂಸದ

Published : Dec 18, 2016, 02:26 PM ISTUpdated : Apr 11, 2018, 12:46 PM IST
ಕಲಾಪ ವ್ಯರ್ಥವಾದ ಹಿನ್ನೆಲೆಯಲ್ಲಿ ವೇತನ ಹಿಂದಿರುಗಿಸುವೆ ಎಂದ ಬಿಜೆಡಿ ಸಂಸದ

ಸಾರಾಂಶ

‘‘ಸಂಸತ್ತಿನ ಕಲಾಪಗಳು ವ್ಯರ್ಥವಾಗುತ್ತಿರುವುದರಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಎಲ್ಲ ಸವಾಲತ್ತುಗಳನ್ನು ಪಡೆಯುತ್ತಿರುವ ಹೊರತಾಗಿಯೂ ನಾವು ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ" - ಜಯಂತ್ ಜಯ್ ಪಾಂಡಾ, ಬಿಜೆಡಿ ಸಂಸದ

ನವದೆಹಲಿ(ಡಿ.18): ಚಳಿಗಾಲದ ಸಂಸತ್ ಕಲಾಪದ ಸಮಯ ವ್ಯರ್ಥವಾದ ಪ್ರಮಾಣದಷ್ಟು ವೇತನ ಹಿಂದಿರುಗಿಸುವುದಾಗಿ ಬಿಜು ಜನತಾದಳ(ಬಿಜೆಡಿ) ಪಕ್ಷದ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ನೋಟು ಅಮಾನ್ಯದ ಕ್ರಮದಿಂದ ಚಳಿಗಾಲದ ಅವೇಶನವೂ ಯಾವುದೇ ಚರ್ಚೆಯಿಲ್ಲದೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹಿಂದಿರುಗಿಸುವುದಾಗಿ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಒಡಿಶಾ ಮೂಲದ ಸಂಸದ ಪಾಂಡಾ, ‘‘ಸಂಸತ್ತಿನ ಕಲಾಪಗಳು ವ್ಯರ್ಥವಾಗುತ್ತಿರುವುದರಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಎಲ್ಲ ಸವಾಲತ್ತುಗಳನ್ನು ಪಡೆಯುತ್ತಿರುವ ಹೊರತಾಗಿಯೂ ನಾವು ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ,’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ 5-6 ವರ್ಷಗಳಿಂದ ಕಲಾಪ ವ್ಯರ್ಥವಾದ ಭಾಗದಷ್ಟು ವೇತನ ಮತ್ತು ಭತ್ಯೆಯನ್ನು ವಾಪಸ್ ನೀಡುತ್ತಿದ್ದೆ. ಈಗಲೂ ಅದನ್ನೇ ಅನುಸರಿಸುತ್ತೇನೆ. ಅವೇಶನಕ್ಕೆ ಅಡ್ಡಿಯಾಗಿದ್ದರಿಂದ ಅತಿಹೆಚ್ಚು ಹಣ ಪೋಲಾಗಿದ್ದು, ನನ್ನದು ಏನೇನು ಅಲ್ಲ,’’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ