
ಬೆಂಗಳೂರು(ಸೆ.15): ದೇಶದ ಅತೀ ದೊಡ್ಡ ಫರ್ನಿಚರ್ ಮೇಳಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.
ಸುವರ್ಣ ನ್ಯೂಸ್- ಕನ್ನಡಪ್ರಭ ಪ್ರಾಯೋಜಕತ್ವದ ಈ ಬೃಹತ್ ಪೀಠೋಪಕರಣ ಮತ್ತು ಗೃಹಾಲಂಕಾರ ಮೇಳವನ್ನುಸ್ಯಾಂಡಲ್'ವುಡ್ ನಟಿ ರಾಧಿಕ ಚೇತನ್ ಉದ್ಘಾಟಿಸಲಿದ್ದಾರೆ.
ನಾಳೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆರಂಭವಾಗುವ ಈ ಮೇಳವು ಸೋಮವಾರದವರೆಗೆ (ಸೆ.18) ನಡೆಯಲಿದೆ.
ಮೇಳದಲ್ಲಿ ದೇಶದ ವಿವಿದೆಡೆಯಿಂದ ಖ್ಯಾತ ಫರ್ನಿಚರ್ ತಯಾರಕರು, ಮಾರಾಟಗಾರರು ಹಾಗೂ ವಿನ್ಯಾಸಗಾರರು ಪಾಲ್ಗೊಳಲಿದ್ದಾರೆ.
ಅಲಂಕಾರಿಕ ವಸ್ತುಗಳಿಂದ ಹಿಡಿದು, ಗೃಹಾಲಂಕಾರದ ದೀಪಗಳು, ಕಾರ್ಪೆಟ್'ಗಳು, ಫರ್ನಿಚರ್'ಗಳು ಹೀಗೆ ಎಲ್ಲಾ ಬಗೆಯ ವಸ್ತುಗಳ ಬೃಹತ್ ಸಂಗ್ರಹ , ಪ್ರದರ್ಶನ ಹಾಗೂ ಮಾರಾಟವು, ಗ್ರಾಹಕರಿಗೆ ವಿಭಿನ್ನ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.