
ಪಟ್ನಾ (ನ.30): ನೋಟು ನಿಷೇಧ ಘೋಷಣೆಯಾದಾಗಿನಿಂದ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಮಮತಾ ಬ್ಯಾನರ್ಜಿ ಇಂದು ಪಟ್ನಾ ರ್ಯಾಲಿಯಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ.
ಬಿಗ್ ಬಜಾರ್ ನ ಬಿಗ್ ಬಾಸ್ ನಮಗೆಲ್ಲಾ ಪ್ರಧಾನಿಯಾಗಿದ್ದಾರೆ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಷ್ಟು ಕಡೆ ಬಿಗ್ ಬಜಾರ್'ಗಳಿವೆ? ಬಿಗ್ ಬಜಾರ್ ಹೊರತುಪಡಿಸಿ ಎಷ್ಟು ಕಡೆ ನಗದು ಹಣ ಸಿಗುತ್ತಿದೆ? ಎಲ್ಲಾ ಕೋ ಆಪರೇಟಿವ್ ಬ್ಯಾಂಕುಗಳನ್ನು ಮುಚ್ಚಿಸಿ ಬಿಗ್ ಬಜಾರನ್ನೇ ಬಿಗ್ ಬ್ಯಾಂಕನ್ನಾಗಿ ಪರಿವರ್ತಿಸಿಸಲಾಗಿದೆ. ಬಿಗ್ ಬಜಾರ್'ನ ಬಿಗ್ ಬಾಸ್ ನಮಗೆ ಪ್ರಧಾನಿಯಾಗಿದ್ದಾರೆ ಎಂದು ರ್ಯಾಲಿಯನ್ನುದ್ದೇಶಿಸಿ ದೀದಿ ಆರೋಪಿಸಿದ್ದಾರೆ.
ಎಟಿಎಂ ಎದುರು ಜನರು ಕ್ಯೂ ನಿಲ್ಲುವುದನ್ನು ತಪ್ಪಿಸಿ ಅವಿಗೆ ಅನುಕೂಲವಾಗಲೆಂದು ಬಿಗ್ ಬಜಾರ್ ಮಳಿಗೆಗಳಲ್ಲಿ 500 ಹಾಗೂ 1000 ರೂ ನೋಟನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಆಧರಿಸಿ ಮಮತಾ ಬ್ಯಾನರ್ಜಿ ಮೋದಿ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.