ನರಕವಾಗಿದ್ದ ಜಿಲ್ಲಾಸ್ಪತ್ರೆಯಲ್ಲಿ ಫುಲ್ ಟ್ರೀಟ್ಮೆಂಟ್!: ಸುವರ್ಣ ನ್ಯೂಸ್'ನಿಂದ ಎಚ್ಚೆತ್ತುಕೊಂಡ ಬ್ರಿಮ್ಸ್ ಅಧಿಕಾರಿಗಳು

Published : Oct 07, 2017, 08:15 AM ISTUpdated : Apr 11, 2018, 12:49 PM IST
ನರಕವಾಗಿದ್ದ ಜಿಲ್ಲಾಸ್ಪತ್ರೆಯಲ್ಲಿ ಫುಲ್ ಟ್ರೀಟ್ಮೆಂಟ್!: ಸುವರ್ಣ ನ್ಯೂಸ್'ನಿಂದ ಎಚ್ಚೆತ್ತುಕೊಂಡ ಬ್ರಿಮ್ಸ್ ಅಧಿಕಾರಿಗಳು

ಸಾರಾಂಶ

ಅದು ಹೇಳಿಕೊಳ್ಳೋಕೆ ಮಾತ್ರ ಆಸ್ಪತ್ರೆಯಾಗಿತ್ತು. ಅಲ್ಲಿಗೆ ಹೋಗುವ ರೋಗಿಗಳು ನರಕಯಾತನೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ಏನು ಕೇಳಿದರೂ ಖಾಸಗಿ ಆಸ್ಪತ್ರೆಯತ್ತ ಕೈ ಮಾಡಿ ತೋರಿಸುವ ಸಂಪ್ರದಾಯ ಶುರುವಾಗಿತ್ತು. ಯಾವಾಗ ಸುವರ್ಣ ನ್ಯೂಸ್​​ನಲ್ಲಿ ವಿಸ್ತೃತ ವರದಿ ಪ್ರಸಾರವಾಯ್ತೋ, ಅಲ್ಲಿ ಪರಿಸ್ಥಿತಿನೇ ಬದಲಾಯ್ತು. ಇದು ಸುವರ್ಣ ನ್ಯೂಸ್​ನ ಬಿಗ್​ ಇಂಪ್ಯಾಕ್ಟ್​ ಸ್ಟೋರಿ.

ಬೀದರ್(ಅ.07): ಸದ್ಯ ಖುಷಿಯಾಗಿ ಸ್ಕ್ಯಾನಿಂಗ್​ಗಾಗಿ ಲೈನಿನಲ್ಲಿ ನಿಂತ ಗರ್ಭಿಣಿಯರು, ಬೀದರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಣ್ಣೀರು ಇಡುತ್ತಿದ್ದರು. ಸ್ಕ್ಯಾನಿಂಗ್ ಗಾಗಿ ಗರ್ಭಿಣಿಯರಿಗೆ, ರೋಗಿಗಳಿಗೆ ಇಲ್ಲಿನ ಸಿಬ್ಬಂದಿ ಪ್ರತಿದಿನ ನಾಳೆ ಬಾ ಎನ್ನುವ ಮಂತ್ರ ಶುರು ಮಾಡಿದ್ರು. ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆ ಕಡೆ ಕೈ ಮಾಡಿ ತೋರಿಸುತ್ತಿದ್ದರು. ಆದ್ರೆ ಯಾವಾಗ ಈ ಜಿಲ್ಲಾಸ್ಪತ್ರೆಯ ಕರ್ಮಕಾಂಡದ ಬಗ್ಗೆ ಸುವರ್ಣ ನ್ಯೂಸ್​ನಲ್ಲಿ ವರದಿ ಪ್ರಸಾರವಾಯ್ತೋ ಕೂಡಲೇ ಎಚ್ಚೆತ್ತುಕೊಂಡ ಬ್ರಿಮ್ಸ್​​'ನ ಅಧಿಕಾರಿಗಳು ಸ್ಕ್ಯಾನಿಂಗ್ ವಿಭಾಗವನ್ನ ಇದೀಗ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಿದ್ದಾರೆ.

ಇದು ಇಂದು ನಿನ್ನೆಯದು ಸಮಸ್ಯೆಯಲ್ಲ. ಸತತವಾಗಿ ಕಳೆದ 15 ದಿನಗಳಿಂದ ಗರ್ಭಿಣಿಯರು, ರೋಗಿಗಳು ಪರದಾಡುತ್ತಿದ್ದರು. ಯಾವಾಗ ಸುವರ್ಣನ್ಯೂಸ್'​ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೂಡಲೇ ಎಲ್ಲಾ ಆರಂಭವಾಗಿದೆ. ಹಳೆ ಆಸ್ಪತ್ರೆಯಲ್ಲಿದ್ದ ಸ್ಕ್ಯಾನಿಂಗ್​ ಡಿಪಾರ್ಟ್​ಮೆಂಟ್​ ಹೊಸ ಬ್ರಿಮ್ಸ್​ ಬಿಲ್ಡಿಂಗ್​ನಲ್ಲಿ ಪ್ರಾರಂಭಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಸುವರ್ಣ ನ್ಯೂಸ್​ನಿಂದ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಬಂದ್​ ಆಗಿರುವ ಸ್ಕ್ಯಾನಿಂಗ್​ ಡಿಪಾರ್ಟ್​ಮೆಂಟ್​ ಮತ್ತೆ ಪ್ರಾರಂಭವಾಗಿದೆ. ಹೀಗೆ ಆಸ್ಪತ್ರೆಯ ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗಲಿ ಎನ್ನುವುದೇ ನಮ್ಮ ಆಶಯ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!