ಭೂಪೇನ್‌ ಹಜಾರಿಕಾ ಭಾರತ ರತ್ನ ತಿರಸ್ಕಾರ?

Published : Feb 12, 2019, 12:03 PM IST
ಭೂಪೇನ್‌ ಹಜಾರಿಕಾ ಭಾರತ ರತ್ನ ತಿರಸ್ಕಾರ?

ಸಾರಾಂಶ

ಭಾರತ ರತ್ನ ತಿರಸ್ಕರಿಸಲು ಭೂಪೇನ್‌ ಹಜಾರಿಕಾ ಕುಟುಂಬ ಸದಸ್ಯರ ಚಿಂತನೆ

ಕೋಲ್ಕತಾ[ಫೆ.12]: ಪ್ರಖ್ಯಾತ ಸಂಗೀತ ನಿರ್ದೇಶಕ, ಗಾಯಕ ಭೂಪೇನ್‌ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದ ಭಾರತ ರತ್ನ ಪ್ರಶಸ್ತಿಯನ್ನು ತಿರಸ್ಕರಿಸುವ ಬಗ್ಗೆ ಕುಟುಂಬ ಸದಸ್ಯರು ಚಿಂತನೆ ನಡೆಸಿದ್ದಾರೆ. ಆದರೆ ಈ ಚಿಂತನೆ ಬಗ್ಗೆಯೇ ಅವರ ಕುಟುಂಬದಲ್ಲಿ ಅಪಸ್ವರ ಕೂಡಾ ಕೇಳಿಬಂದಿದೆ.

ಕೇಂದ್ರ ಸರ್ಕಾರ, ಅಸ್ಸಾಂನಲ್ಲಿ ವಿವಾದಿತ ಪೌರತ್ವ ಕಾಯ್ದೆ ಜಾರಿಗೆ ಮುಂದಾಗಿರುವುದರ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಭೂಪೇನ್‌ ಅವರ ಪುತ್ರ ತೇಜ್‌ ಹಜಾರಿಕಾ ತೀವ್ರ ವಿರೋಧ ಹೊಂದಿದ್ದಾರೆ. ಹೀಗಾಗಿ ಪ್ರಶಸ್ತಿಯನ್ನು ತಿರಸ್ಕರಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಅವರ ಈ ಪ್ರಸ್ತಾಪಕ್ಕೆ ಭೂಪೇನ್‌ ಅವರ ಸೋದರ ಸಮರ್‌ ಅಪಸ್ವರ ಎತ್ತಿದ್ದಾರೆ. ಭಾರತ ರತ್ನ ಗೌರವ ತಿರಸ್ಕರಿಸುವ ವಿಷಯವನ್ನು ಒಬ್ಬ ವ್ಯಕ್ತಿ ನಿರ್ಧರಿಸಲಾಗದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಸಾಮಾಜಿಕ ಕಾರ್ಯಕರ್ತ ದಿ. ನಾನಾಜಿ ದೇಶ್‌ಮುಖ್‌, ದಿ. ಭೂಪೇನ್‌ ಹಜಾರಿಕಾ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಗೆ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ